Feedback / Suggestions

. ಅಪಘಾತ ಪ್ರಕರಣ 

  • ಉಡುಪಿ : ಪಿರ್ಯಾದಿದಾರರಾದ ರಮಾ.ಜೆ.ರಾವ್ (49), ಗಂಡ: ಜನಾರ್ಧನಾ ರಾವ್, ವಾಸ: ಪದ್ಮಲೀಲ ರಾಂಪುರ ಅಲೆವೂರು ಗ್ರಾಮ ಅಲೆವೂರು ಅಂಚೆ ಅಲೆವೂರು ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 05/10/2021ರಂದು ತನ್ನ ಬ KA-20-EF-5269ನೇ ಸ್ಕೂಟರ್ ನಲ್ಲಿ ಪಿಗ್ಮೀ ಕಲೆಕ್ಷನ್ ಮಾಡುತ್ತಾ ಜೋಡುಕಟ್ಟೆಯಿಂದ ಕಿನ್ನಿಮುಲ್ಕಿ ಕಡೆಗೆ ಸವಾರಿ ಮಾಡಿಕೊಂಡು ಹೋಗುವಾಗ ಕಿನ್ನಿಮುಲ್ಕಿಯ ಪೆಟ್ರೋಲ್ ಬಂಕ್ ಬಳಿ ತಲುಪುವಾಗ ಸಮಯ ಸಂಜೆ 5:50 ಗಂಟೆಗೆ ಹಿಂದಿನಿಂದ ಜೋಡುಕಟ್ಟೆ ಕಡೆಯಿಂದ ಓರ್ವ ಗೂಡ್ಸ್ ಟೆಂಪೋ ಚಾಲಕ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ತಲೆಗೆ ಗಾಯವಾಗಿ ಬಲಕೈಗೆ ಮೂಳೆ ಮುರಿತ ಉಂಟಾಗಿ ಆದರ್ಶ ಆಸ್ಪತ್ರೆಗೆ ದಾಖಲಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಅಪಘಾತಪಡಿಸಿದ ನಂತರ ಗೂಡ್ಸ್ ಟೆಂಪೋವನ್ನು ಅದರ ಚಾಲಕ ಸ್ಥಳದಲ್ಲಿ ನಿಲ್ಲಿಸದೇ ಗೂಡ್ಸ್ ಟೆಂಪೋ ಸಮೇತ ಪರಾರಿಯಾಗಿರುತ್ತಾನೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 67/2021 ಕಲಂ: 279, 338 ಐಪಿಸಿ ಮತ್ತು 134(ಎ)&(ಬಿ) ಜೊತೆಗೆ 187 ಐ.ಎಮ್.ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಕೋಟ: ಕಮಲ ದೇವಾಡ್ತಿ (80) ಎಂಬುವವರು ತನ್ನ ಮನೆಯಾದ ಬ್ರಹ್ಮಾವರ ತಾಲೂಕು ವಡ್ಡರ್ಸೆ ಗ್ರಾಮದ ಕುದ್ರುಮನೆ ಬೆಟ್ಟು ಎಂಬಲ್ಲಿ ವಾಸವಿದ್ದು ಅವರು ಎಂದಿನಂತೆ ದಿನಾಂಕ 19/09/2021 ರಂದು ಬೆಳಿಗ್ಗೆ 10:30 ಗಂಟೆಯ ಸಮಯಕ್ಕೆ ಎಂದಿನಂತೆ ಗದ್ದೆ ನೋಡಿಕೊಂಡು ಬರಲು ಹೋಗಿದ್ದವರು ಬೊಬ್ಬೆ ಹಾಕಿದ್ದನ್ನು ಕೇಳಿ ಪಿರ್ಯಾದಿದಾರರಾದ ವಿಘ್ನೇಶ(22) , ತಂದೆ: ಮಂಜುನಾಥ ,ವಾಸ; ಕುದ್ರುಮನೆ ವಡ್ಡರ್ಸೆ ಗ್ರಾಮ ಬ್ರಹ್ಮಾವರ ತಾಲೂಕು ಹಾಗೂ ನೆರೆಕರೆಯವರು ಓಡಿ ಹೋಗಿ ನೋಡಲಾಗಿ ಕಮಲ ದೇವಾಡ್ತಿಯವರು ಗದ್ದೆಯ ಅಂಚಿನಲ್ಲಿ ಬಿದ್ದುಕೊಂಡಿದ್ದು, ಹಾಗೂ ಅಲ್ಲಿಯೇ ಒಂದು ಹಂದಿ ಓಡಾಡಿಕೊಂಡಿದ್ದು, ಗದ್ದೆಯಲ್ಲಿ ಬಿದ್ದಿದ್ದ ಕಮಲ ದೇವಾಡ್ತಿಯವರಲ್ಲಿ ವಿಚಾರಿಸಿದಾಗ ಒಂದು ಹಂದಿ ಬಂದು ಕಮಲ ದೇವಾಡ್ತಿಯವರ ಬಲಬದಿ ಸೊಂಟದಿಂದ ಕೆಳಗೆ ತೊಡೆಭಾಗ ಗುದ್ದಿ ರಕ್ತಗಾಯ ಮಾಡಿದ್ದು, ಕೂಡಲೇ ಅವರನ್ನು ಉಪಚರಿಸಿ ಒಂದು ರಿಕ್ಷಾದಲ್ಲಿ ಕೋಟೇಶ್ವರ ಎನ್‌ ಆರ್‌ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದಲ್ಲಿ ವೈದ್ಯರು ಕಮಲ ದೇವಾಡ್ತಿಯವರಿಗೆ ಸೊಂಟದ ಮೂಳೆ ಮುರಿತದ ಬಗ್ಗೆ ಶಸ್ತ್ರ ಚಿಕಿತ್ಸೆ ಮಾಡಿ, ಮೂರು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಿರುತ್ತಾರೆ. ನಂತರ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ಕಮಲ ದೇವಾಡ್ತಿಯವರು ದಿನಾಂಕ 06/10/2021 ರಂದು ಬೆಳಿಗ್ಗೆ 8:00 ಗಂಟೆಗೆ ಹಂದಿ ಗುದ್ದಿ ಸೊಂಟಕ್ಕೆ ಆದ ಗಾಯದ ತೀವ್ರತೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ . ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 37 /2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

Last Updated: 06-10-2021 07:06 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080