Feedback / Suggestions

ಹಲ್ಲೆ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ಆದರ್ಶ ಶೆಟ್ಟಿ ಇವರು ನಿನ್ನೆ ದಿನ ದಿನಾಂಕ: 05.07.2021 ರಂದು ಸಂಜೆ ಕಾಪು ತಾಲೂಕು ಪಲಿಮಾರು ಗ್ರಾಮದ ಹೈಸ್ಕೂಲ್ ಮೈದಾನದಲ್ಲಿ ಅವರ ಸ್ನೇಹಿತರೊಂದಿಗೆ ಕ್ರಿಕೆಟ್ ಆಟವಾಡುತ್ತಿರುವ ಸಮಯ ಸುಮಾರು 17:30 ಗಂಟೆಯ ವೇಳೆಗೆ  ಕ್ರಿಕೆಟ್ ಆಟವಾಡಲು ಕರ್ನಿರೆ ಗ್ರಾಮದಿಂದ ಕೀರ್ತೇಶ್, ನಿತೇರ್ಶ, ಅಭಿಷೇಕ್, ದಿನೇಶ್, ನಿತೇಶ್ ದೇವಾಡಿಗ, ಹಾಗೂ ರಾಜೇಶ್ ಎಂಬುವರು ಬಂದು ಆಟವಾಡುತ್ತಿರುವ ಸಮಯ 18:00 ಗಂಟೆಯ ವೇಳೆಗೆ ಪಿರ್ಯಾದಿದಾರರು ಬೌಲಿಂಗ್ ಮಾಡುವ ವಿಚಾರದಲ್ಲಿ ಆರೋಪಿತರಿಗೂ ಹಾಗೂ ಪಿರ್ಯಾದಿದಾರರ ನಡುವೆ ಮಾತಿಗೆ ಮಾತು ಬೆಳೆದು ಆ 6 ಜನ ಆರೋಪಿತರು ಕೈಯಿಂದ ಪಿರ್ಯಾದಿದಾರರ ಮುಖ, ತಲೆ, ಎದೆ, ಹೊಟ್ಟೆಗೆ ಹೊಡೆದು, ಕಾಲಿನಿಂದ ಹೊಟ್ಟೆ ಗೆ ಮತ್ತು ಮರ್ಮಾಂಗಕ್ಕೆ ತುಳಿದು ಹಲ್ಲೆ ನಡೆಸಿ, ಪಿರ್ಯಾದಿದಾರರನ್ನುದ್ದೇಶಿಸಿ ಅವಾಚ್ಯವಾಗಿ ಬೈದು  ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದು,  ಪಿರ್ಯಾದಿದಾರರು  ಚಿಕಿತ್ಸೆಯ ಬಗ್ಗೆ ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2021 ಕಲಂ: 143, 147, 323, 504, 506, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಬೈಂದೂರು : ದಿನಾಂಕ 05/07/2021 ರಂದು 16:00 ಗಂಟೆಗೆ ಸಂತೋಷ್ ಎ ಕಾಯ್ಕಿಣಿ  ವೃತ್ತ ನಿರೀಕ್ಷಕರು ಬೈಂದೂರು ವೃತ್ತ, ಬೈಂದೂರು ಇವರಿಗೆ ಬಿಜೂರು ಗ್ರಾಮದ ಕೋಟ್ಯಾಡಿ ಎಂಬಲ್ಲಿ ಸರಕಾರಿ ಜಾಗದ ಸಾರ್ವಜನಿಕ ಸ್ಥಳದಲ್ಲಿ  ಕೋಳಿ ಅಂಕ ಜುಗಾರಿ ಆಟ ನಡೆಯುತ್ತಿದೆ ಎಂದು ಮಾಹಿತಿ ಬಂದ ಮೇರೆಗೆ ಬೈಂದೂರು ಪೊಲೀಸ್ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತಲುಪಿ ಮರೆಯಲ್ಲಿ ನಿಂತು  ಗುಪ್ತವಾಗಿ ಮಾಹಿತಿ ಕಲೆಹಾಕಿದಾಗ ಜನರು ಗುಂಪು ಕಟ್ಟಿಕೊಂಡು ಇಬ್ಬರು 2 ಕೋಳಿ ಹುಂಜಗಳ ಕಾಲಿಗೆ  ಕೋಳಿ ಬಾಳನ್ನು ಕಟ್ಟಿ ಜೂಜಾಟಕ್ಕೆ ಬಿಟ್ಟಿದ್ದು ಉಳಿದವರು ಸುತ್ತುವರಿದು ತಮ್ಮ ಕೋಳಿಗಳನ್ನು ಕೈ ನಲ್ಲಿ ಹಿಡಿದುಕೊಂಡು ಕಾದಾಟಕ್ಕೆ ಬಿಟ್ಟಿದ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಕೋಳಿ ಅಂಕ ನಡೆಸುತ್ತಿದ್ದ 1) ಮಹಮ್ಮದ್ ಇರ್ಷಾದ್ ಪ್ರಾಯ: 36 ವರ್ಷ ವಾಸ: ಅಯೂಬ್ ರಿಯಾಝ್ ಮಂಜಿಲ್ ಯೋಜನಾನಗರ ಯಡ್ತರೆ  ಗ್ರಾಮ, ಬೈಂದೂರು  ತಾಲೂಕು ಮತ್ತು 2) ಮಹಮ್ಮದ್ ಜಾಹೀರ್ ಪ್ರಾಯ: 34 ವರ್ಷ ವಾಸ: ಅಯೂಬ್ ರಿಯಾಝ್ ಮಂಜಿಲ್ ಯೋಜನಾನಗರ ಯಡ್ತರೆ  ಗ್ರಾಮ, ಬೈಂದೂರು  ತಾಲೂಕು ಇವರನ್ನು ವಶಕ್ಕೆ ಪಡೆದಿದ್ದು ಉಳಿದವರು ಓಡಿ ಹೋಗಿರುತ್ತಾರೆ. ಓಡಿ ಹೋದವರರು ರಾಜು, ಶೇಖರ ಹಾಗೂ ಭರತ್ ಎಂಬುದಾಗಿ ತಿಳಿಯಿತು,  ಕೋಳಿ ಅಂಕಕ್ಕೆ ಬಳಸಿದ  5  ಕೋಳಿಗಳನ್ನು,  ಕೋಳಿಯ ಕಾಲಿಗೆ ಕಟ್ಟಿದ  ಕತ್ತಿ-2 ಹಾಗೂ ನಗದು 1500/-  ರೂಫಾಯಿಯನ್ನು ಪಂಚರುಗಳ ಸಮಕ್ಷಮ ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 115/2021 ಕಲಂ: 87, 93  ಕರ್ನಾಟಕ ಪೊಲೀಸ್  ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕೋಟ: ಪಿರ್ಯಾದಿ ಶಕುಂತಳಾ ಇವರ ತಮ್ಮ ರಾಘವೇಂದ್ರ ಪ್ರಾಯ 29 ವರ್ಷ ಎಂಬವರು ಕಲ್ಮರ್ಗಿ ಹಾರ್ಡ ವೇರ್ ನಲ್ಲಿ ಕೆಲಸ ಮಾಡಿಕೊಂಡಿದ್ದವನು ಪಿರ್ಯಾದಿದಾರರ ಜೊತೆಯಲ್ಲಿಯೇ ವಾಸವಾಗಿದ್ದು, ದಿನಾಂಕ 05/7/2021 ರಂದು ರಾತ್ರಿ 9.30   ಗಂಟೆಯ ಸಮಯಕ್ಕೆ ಊಟ ಮಾಡಿ ನಂತರ ಮನೆಯ ಹೊರಗಡೆ ಇರುವ ನಾಯಿಗೆ ಅನ್ನ ಹಾಕುವರೆ ಬಾವಿಯ ಬಳಿಯಿರುವ ಕಲ್ಲಿನ ಬಳಿ ಹೋಗುತ್ತಿರುವಾಗ  ಆವರಣವಿಲ್ಲದ ಬಾವಿಗೆ  ಕಾಲು ಜಾರಿ ಬಿದ್ದಿದ್ದು, ಆ ಸಮಯ ಮಳೆ ಬರುತ್ತಿದ್ದು, ಪಿರ್ಯಾದಿದಾರರು ನೋಡಿ ಬೊಬ್ಬೆ ಹೊಡೆದಾಗ ನೆರೆಕೆರೆಯ ಸುಜನ್ ಹಾಗೂ ಮಂಜುನಾಥ ರವರು ಓಡಿ ಬಂದು ಬಾವಿಗೆ ಏಣಿ ಇಳಿಸಿ ಬಾವಿಯಿಂದ ಮೇಲಕ್ಕೆತ್ತಿ  ನೋಡಲಾಗಿ   ಮಾತನಾಡುವ ಸ್ಥಿತಿಯಲ್ಲಿ  ಇರಲಿಲ್ಲ. ಕೂಡಲೇ ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ  ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ  ವೈದ್ಯರು ಪರೀಕ್ಷಿಸಿ  ರಾತ್ರಿ 11.00 ಗಂಟೆಗೆ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 20/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 06-07-2021 06:11 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080