ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಬೈಂದೂರು: ಫಿರ್ಯಾದಿ ಹರಿಶ್ಚಂದ್ರ ಇವರು ದಿನಾಂಕ:05/04/2021 ರಂದು ಬೆಳಿಗ್ಗೆ 08:00 ಗಂಟೆಗೆ ಸೆಂಟ್ರಿಂಗ್ ಕೆಲಸದ ನಿಮಿತ್ತ ಅವರ  ಬಾಬ್ತು ಮೋಟಾರ್ ಸೈಕಲ್ ನಲ್ಲಿ ಮನೆಯಿಂದ ಹೊರಟು ಉಪ್ಪುಂದ ಗ್ರಾಮದ ಕಂಬದಕೋಣೆ ರೈತರ ಸೇವಾ ಸಹಕಾರಿ ಸೊಸೈಟಿಯ ಬಳಿ ತಲುಪುವಾಗ್ಗೆ ಪಿರ್ಯಾದಿದಾರರ ಪರಿಚಯದ ರಾಮ ಪೂಜಾರಿಯವರು ಕಂಬದಕೋಣೆ ರೈತರ ಸೇವಾ ಸಹಕಾರಿ ಸೊಸೈಟಿ ಎದುರಿನ ಎನ್ ಹೆಚ್ 66 ರ ರಸ್ತೆಯ ಬದಿಯಲ್ಲಿ ಅಂಬಾಗಿಲು ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಎನ್ ಎಚ್ 66 ರಲ್ಲಿ ಓರ್ವ ಕಾರು ಚಾಲಕನು ಆತನ ಬಾಬ್ತು ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ರಾಮ ಪೂಜಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಹೋಗಿದ್ದು ಅದರ ಪರಿಣಾಮ ರಾಮ ಪೂಜಾರಿರವರಿಗೆ ತಲೆಗೆ ತೀವೃ ತರಹದ ರಕ್ತಗಾಯವಾಗಿರುತ್ತದೆ. ಅಪಘಾತವೆಸಗಿದ ಕಾರಿನ ನಂಬ್ರ ಫಿರ್ಯಾದಿದಾರರು ನೋಡಲಾಗಿ ಕೆಎ 51 ಝಡ್ 9907 ನೇದ್ದಾಗಿರುತ್ತದೆ. ಗಾಯಗೊಂಡ ಅವರನ್ನು ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಲು ತಿಳಿಸಿದ್ದು 108 ಅಂಬುಲೆನ್ಸ್ ವಾಹನದಲ್ಲಿ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಅವರ ಮನೆಯವರೊಂದಿಗೆ ಕಳುಹಿಸಿ ಕೊಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 69/2021 ಕಲಂ: 279, 338 ಐಪಿಸಿ ಮತ್ತು ಕಲಂ 134(ಎ&(ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಉಡುಪಿ: ಪಿರ್ಯಾದಿ ಶಂಕರ ಭಂಡಾರಿ ಇವರು  KA20 MC 9432  ವರ್ಣ ಹುಂಡೈ ಕಾರಿನ ಅರ್‌ಸಿ ಮಾಲಕರಾಗಿರುತ್ತಾರೆ. ಅರೋಪಿ ಅನುಪ್ ಶೆಟ್ಟಿಯವರು ಹಲವಾರು ವರ್ಷದಿಂದ ಪಿರ್ಯಾದುದಾರ ಪರಿಚಯದವರಾಗಿರುತ್ತಾರೆ. ಪಿರ್ಯಾದುದಾರರು ಹಲವಾರು ಬಾರಿ ಅರೋಪಿತರಿಗೆ ತಮ್ಮ ಕಾರನ್ನು ಉಪಯೋಗಿಸುವರೇ ನೀಡಿರುತ್ತಾರೆ. ಹೀಗಿರುವಾಗಿ ಅಗಸ್ಟ್ 2020 ರಂದು  ಬೆಂಗಳೂರಿನಲ್ಲಿ ಕಾರ್ಯಕ್ರಮ ಇರುವುದಾಗಿ ಹೇಳಿ ಅರೋಪಿತರು ಪಿರ್ಯಾದುದಾರರಿಂದ ಕಾರನ್ನು ಪಡೆದುಕೊಂಡು ಹೋಗಿರುತ್ತಾರೆ. ನಂತರ ತುಂಬಾ ಸಮಯದವರೆಗೂ ವಾಪಾಸು ನೀಡಿರುವುದಿಲ್ಲ ಪಿರ್ಯಾದುದಾರರು ಅರೋಪಿತರ ಮೋಬೈಲ್‌ಗೆ ಕರೆ ಮಾಡಿದಾಗ ನಾನು ವಾಪಾಸು ಬಂದ ಮೇಲೆ ನೀಡುವುದಾಗಿ ತಿಳಿಸಿರುತ್ತಾರೆ. ಸ್ವಲ್ಪದಿನಗಳ  ತಮ್ಮ ಮೊಬೈಲ್‌ನ್ನು ಸ್ವಿಚ್‌ಅಫ್ ಮಾಡಿರುತ್ತಾರೆ, ಮತ್ತು ಇದುವರೆಗೂ  ವಾಪಾಸು ಬಾರದೆ ತಲೆಮರೆಸಿ ಕೊಂಡಿರುತ್ತಾರೆ. ಅರೋಪಿತರು ಪಿರ್ಯಾದುದಾರರಿಗೆ ಉದ್ದೇಶಪೂರ್ವಕವಾಗಿ ಕಾರನ್ನು ಪಡೆದುಕೊಂಡು ಹೋಗಿ ವಾಪಾಸು ನೀಡದೆ ಮೋಸ ವಂಚನೆ ಮಾಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 57/2021 ಕಲಂ: 405,406,415,417,420 ಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ 

  • ಅಜೆಕಾರು: ಜನಾರ್ಧನ ನಾಯ್ಕ ಪ್ರಾಯ 42 ವರ್ಷ ಎಂಬವರು ಸುಮಾರು 2 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 05/04/2021 ರಂದು ಬೆಳಗಿನ ಜಾವ 02:00 ಗಂಟೆಯಿಂದ 07:30 ಗಂಟೆಯ ಮದ್ಯಾವಧಿಯಲ್ಲಿ ಕಾರ್ಕಳ ತಾಲೂಕು ಎಳ್ಳಾರೆ ಗ್ರಾಮದ ರಾಂಪುರ ಎಂಬಲ್ಲಿ ತನ್ನ ಮನೆಯಲ್ಲಿ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 02/2021 ಕಲಂ: 174 ಸಿ.ಅರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿ ನವೀನ್ ಶೆಟ್ಟಿ ಇವರು ದಿನಾಂಕ: 04-04-2021 ರಂದು ಸಂಜೆ ಸುಮಾರು 6:00 ಗಂಟೆ ಸಮಯಕ್ಕೆ ಕಡೇಕಾರು ಜಂಕ್ಷನ್ ನಲ್ಲಿ ಇರುವಾಗ ಅಲ್ಲೆ ಪಕ್ಕದಲ್ಲಿರುವ ಪೂವಚ್ಚಾಯ ಕಾಂಪ್ಲೆಕ್ಸ್‌‌ ನ ಶ್ರೀ ಗಣೇಶ್ ಬೇಕರಿ ಎದುರು ಮುಚ್ಚಲ ಹಾಕಿದ ರಿಂಗ್ ಬಾವಿ ಎದುರಲ್ಲಿ ಒಬ್ಬ ವ್ಯಕ್ತಿಯು ಪೀಡ್ಸ್ ರೀತಿ ಒದ್ದಾಡುತ್ತಿದ್ದುದನ್ನು ನೋಡಿದ ಪಿರ್ಯಾದಿದಾರರು ಅವರ ರೇಷನ್ ಕಾರ್ಡ್‌ ನೋಡಿದಲ್ಲಿ ಸುನೀಲ್ ಡಿಸೋಜ, ಚೆರ್ಕಾಡಿ ಬ್ರಹ್ಮಾವರ ಎಂಬುದಾಗಿ ತಿಳಿದಿದ್ದು ಪಿರ್ಯಾದಿದಾರರು ಹಾಗೂ ಇತರರು ಸುನೀಲ್ ಡಿಸೋಜಾ (39) ರವರನ್ನು 108 ನೇ ವಾಹನಕ್ಕೆ ಕರೆ ಮಾಡಿ ಚಿಕಿತ್ಸೆ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಕಳುಹಿಸಿಕೊಟ್ಟಿರುತ್ತಾರೆ. ಪಿರ್ಯಾದಿದಾರರಿಗೆ ಸುನೀಲ್ ಡಿಸೋಜಾ ರವರು 04-04-2021 ರಂದು ರಾತ್ರಿ 9:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ಮಾಹಿತಿ ಬಂದಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 18/2021 ಕಲಂ: 174 ಸಿ.ಅರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 05-04-2021 05:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080