ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾಧ ವಾಸು ದರ್ಶನ್ (20) ತಂದೆ: ಬಾಬು ವಾಸ: ಹುಂಚರಬೆಟ್ಟು ಬಿ.ಸಿ ರಸ್ತೆ  ವಡೇರ ಹೋಬಳಿ ಗ್ರಾಮ ಕುಂದಾಫುರ ಇವರು ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು ಕೆಲಸದ ನಿಮಿತ್ತ ಹಾರ್ಡ ವೇರ್ ಅಂಗಡಿಗೆ ಹೋಗಲು ದಿನಾಂಕ 04/03/2022 ರಂದು ಮಧ್ಯಾಹ್ನ 12:30 ಗಂಟೆಗೆ KA-20-EJ-5989 ನೇ ಮೋಟಾರ್ ಸೈಕಲ್ ನ್ನು ಕೆರಾಡಿ ಕಡೆಯಿಂದ ಹೊಸೂರು ಕಡೆಗೆ ರಸ್ತೆ ಎಡ ಬದಿಯಿಂದ ನಿಧಾನವಾಗಿ   ಚಲಾಯಿಸಿಕೊಂಡು ಹೋಗುತ್ತ ಹೊಸೂರು ಗ್ರಾಮದ ಕೆರಾಡಿ ಚಿತ್ತೂರು ರಸ್ತೆಯ ಕದಳಿ ಎಂಬಲ್ಲಿ ತಲುಪಿದಾಗ ವಾಸು ದರ್ಶನ್ ರವರ ಎದುರಿನಿಂದ ಚಿತ್ತೂರು ಕಡೆಯಿಂದ ಕೆರಾಡಿ ಕಡೆಗೆ  ಆರೋಪಿ ದಿನೇಶ್ ತನ್ನ KA-20 ES-8149 ನೇ ಮೋಟಾರು ಸೈಕಲ್ ನ್ನು ವೇಗವಾಗಿ ನಿರ್ಲಕ್ಷತನದಿಂದ ತೀರಾಬಲ ಬದಿಗೆ ಚಲಾಯಿಸಿ ವಾಸು ದರ್ಶನ್ ರವರ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ವಾಸು ದರ್ಶನ್ ರವರು ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ತಲೆಗೆ ರಕ್ತ ಗಾಯ ಮತ್ತು ಬಲ & ಎಡ ಭುಜಕ್ಕೆ ಒಳ ಜಖಂ ನೋವು ಉಂಟಾಗಿ ಕುಂದಾಫುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿ ಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 12/2022 ಕಲಂ. 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಕಾಫು: ಪಿರ್ಯಾದಿದಾರರಾದ ಅಜಯ್ ಚೌಹಾನ್ (25) ತಂದೆ: ದಿ .ಶತ್ರು ಧನ್ ಚೌಹಾನ್ ವಾಸ;ಸೆಂದ್ರಿ ಮುಂಡ ಗ್ರಾಮ, ಕರ್ಮಾ (ಪೋ) ಕುನ್ ಕುರಿ (ತಾ) ಜಶ್ಪುರ್ (ಜಿ) ಛತ್ತೀಸ್ ಘಡ ರಾಜ್ಯ ಇವರು ಉಡುಪಿ ತಾಲ್ಲೂಕು ಉದ್ಯಾವರ ಗ್ರಾಮದ ಪಿತ್ರೋಡಿ ಯಶಸ್ವಿ ಫಿಶ್ ಮಿಲ್ ಮತ್ತು ಆಯಿಲ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 05/03/2022 ರಂದು ಅಜಯ್ ಚೌಹಾನ್ ರವರು ಮತ್ತು ನರೇಶ್ ಮೈಕಲ್, ಫೋಗ್ನಾ ಚೌಹಾನ್ (42) ರವರುಗಳು ಬೆಳಿಗ್ಗೆ 05:55 ಗಂಟೆ ಸಮಯಕ್ಕೆ ಕೆಲಸದಲ್ಲಿರುವಾಗ ಫೋಗ್ನಾ ಚೌಹಾನ್ ರವರು  ಬಂದು ಎದೆ ನೋವಾಗುತ್ತಿದೆ ಎಂದು ಹೇಳಿ ನೆಲಕ್ಕೆ ಬಿದ್ದರು ಕೂಡಲೇ ಅಜಯ್ ಚೌಹಾನ್ ರವರು ಮತ್ತು ನರೇಶ್ ಮೈಕಲ್ ರವರುಗಳು ಉಪಚರಿಸಿ, ನಂತರ ಫೋಗ್ನಾ  ಚೌಹಾನ್ ರವರು ಅರೆಪ್ರಜ್ಙಾ ವಸ್ಥೆಯಲ್ಲಿದ್ದು ಮಾತಾನಾಡದ ಸ್ಥಿತಿಯಲ್ಲಿ ಇರುವುದನ್ನು ಕಂಡು ಕಂಪನಿ ಮಾಲಕರಿಗೆ ಹಾಗೂ ಮೃತರ ಮನೆಯಾದ ಛತ್ತೀಸ್ ಘಡದಲ್ಲಿರುವ  ಸಂಬಂಧಿಕರಿಗೆ ತಿಳಿಸಿ ಕಂಪನಿ ವಾಹನದಲ್ಲಿ ಚಿಕಿತ್ಸೆ ಬಗ್ಗೆ ಉಡುಪಿಯ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಬೆಳಿಗ್ಗೆ 07:11 ಗಂಟೆಗೆ ಫೋಗ್ನಾ ಚೌಹಾನ್ ರವರು ಮೃತಪಟ್ಟಿರುತ್ತಾರೆ ಎಂದು ತಿಳಿಸಿದ್ದು ನಂತರ ಮೃತ ದೇಹವನ್ನು ಉಡುಪಿ ಜಿಲ್ಲಾ ಸರ್ಕಾರಿ  ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು ಮೃತರು ಹೃದಯ ಸಂಬಂದಿ ಖಾಯಿಲೆ ಯಿಂದ ಅಥವಾ ಬೇರಾವುದೋ ಖಾಯಿಲೆಯಿಂದ ಮೃತಪಟ್ಟಿರುವ ಸಾಧ್ಯತೆ ಇದ್ದು ಮೃತರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 03/2022 ಕಲಂ: 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 05-03-2022 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080