ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 04/03/2021 ರಂದು ಬೆಳಿಗ್ಗೆ  ಸುಮಾರು 9:30  ಗಂಟೆಗೆ,   ಕುಂದಾಪುರ  ತಾಲೂಕಿನ, ಕಸಬಾ ಗ್ರಾಮದ  ಹಳೇ ಅದರ್ಶ  ಆಸ್ಪತ್ರೆಯ ಬಳಿ NH 66 ರಸ್ತೆಯಲ್ಲಿ,  ಆಪಾದಿತ ಶಫಿಯುಲ್ಲಾ  ಎಂಬವರು KA20AB-1357ನೇ Tata ಗೂಡ್ಸ್‌ ವಾಹನವನ್ನು ತಲ್ಲೂರು  ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ  ಹಾಗೂ  ನಿರ್ಲಕ್ಷ್ಯತನದಿಂದ ಚಾಲನೆ  ಮಾಡಿಕೊಂಡು  ಬಂದು, ಅದೇ  ದಿಕ್ಕಿನಲ್ಲಿ  ಪಿರ್ಯಾದಿದಾರರಾದ ಕರಿಯಣ್ಣ  ಬಿಲ್ಲವ ಎಂಬವರು   ಸವಾರಿ  ಮಾಡಿಕೊಂಡು  ಹೋಗುತ್ತಿದ್ದ KA20EP-8438ನೇ ಹೀರೋ ಸ್ಪೆಂಡರ್‌ ಬೈಕಿಗೆ  ಹಿಂದಿನಿಂದ ಡಿಕ್ಕಿ  ಹೊಡೆದ ಪರಿಣಾಮ, ಕರಿಯಣ್ಣ  ಬಿಲ್ಲವರವರು  ರಸ್ತೆಗೆ ಬಿದ್ದು ಅವರ ತಲೆಗೆ,ಎಡ, ಬಲ ಕೆನ್ನಗೆ, ಬಲಕಾಲಿನ ಪಾದದ  ಬೆರಳುಗಳಿಗೆ ತರಚಿದ ರಕ್ತಗಾಯ ಹಾಗೂ ಬಲ ಸೊಂಟಕ್ಕೆ ಒಳ ನೋವಾದ ಗಾಯವಾಗಿ ಕುಂದಾಪುರ ಆದರ್ಶ  ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2021 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 04-03-2021 ರಂದು ಮಧ್ಯಾಹ್ನ  1-45  ಘಂಟೆ  ಸುಮಾರಿಗೆ ಪಿರ್ಯಾದಿ ಚಂದ್ರಶೇಖರ ಶೆಟ್ಟಿ ಇವರು ಶಿರಿಯಾರ  ಗ್ರಾಮ ಪಂಚಾಯತ್‌  ಹತ್ತಿರ ಕೊಲ್ಡ್‌ ಡ್ರಿಂಕ್ಸ್‌  ಅಂಗಡಿಗೆ ಹೋಗಿ  ಬರುವಾಗ ಮಂದಾರ್ತಿ  ರಸ್ತೆಯಿಂದ  ಸೈಬ್ರಕಟ್ಟೆ ಶಿರಿಯಾರ ಮುಖ್ಯರಸ್ತೆಗೆ  ಸಂದಿಸುವ ಸ್ಥಳದಲ್ಲಿ ಮೋಟಾರ್‌  ಸೈಕಲ್‌  ನಂಬ್ರ KA 20 S 9800 ನೇದನ್ನು ಸವಾರ ರತ್ನಾಕರ ನಿಲ್ಲಿಸಿಕೊಂಡಿದ್ದು, ಸದ್ರಿ  ಮೋಟಾರ್‌  ಸೈಕಲ್‌ನಲ್ಲಿ ಸಹಸವಾರಿಣಿಯಾಗಿ  ಮಾಲತಿ ರವರಿದ್ದರು. ಆ  ಸಮಯ  ಹಾಲಾಡಿ  ಕಡೆಯಿಂದ ಬ್ರಹ್ಮಾವರ  ಕಡೆಗೆ  ಅಶೋಕ  ಲೈಲ್ಯಾಂಡ್‌  ಟ್ಯಾಂಕರ್‌  ನಂಬ್ರ  KA 19 AC 0483 ನೇದನ್ನು  ಅದರ  ಚಾಲಕ ಜೈನುದ್ದೀನ  ಎಂಬುವವನು ಅತೀ  ವೇಗ  ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು ಎದುರಿನಿಂದ  ಬರುತ್ತಿರುವ  ಒಂದು ವಾಹನವನ್ನು  ಗಮನಿಸಿ  ತಿರುವಿನಲ್ಲಿ  ಒಮ್ಮೇಲೆ  ತನ್ನ  ಬಾಬ್ತು ಟ್ಯಾಂಕರನ್ನು  ತೀರಾ  ಎಡಕ್ಕೆ  ಚಲಾಯಿಸಿ  ಮಂದಾರ್ತಿ  ರಸ್ತೆಯಲ್ಲಿ  ನಿಲ್ಲಿಸಿಕೊಂಡಿದ್ದ  ಮೋಟಾರ್‌  ಸೈಕಲ್‌  ಸವಾರರಿಗೆ ಡಿಕ್ಕಿ  ಹೊಡೆದ ಪರಿಣಾಮ ಮೋಟಾರ್‌  ಸೈಕಲ್‌  ಸವಾರ  ಹಾಗೂ  ಸಹಸವಾರರು  ರಸ್ತೆಗೆ ಬಿದ್ದಿದ್ದು  ಪರಿಣಾಮ  ಮೋಟಾರ್‌  ಸೈಕಲ್‌ ಸಹಸವಾರಿಣಿಯಾಗಿದ್ದು ಸವಾರನ  ಹೆಂಡತಿ ಮಾಲತಿ  ರವರಿಗೆ  ಬಲಕಾಲು, ಕುತ್ತಿಗೆ ತಲೆಗೆ ಪೆಟ್ಟಾಗಿದ್ದು ಮೈಗೆ ತರಚಿದ  ಗಾಯವಾಗಿರುತ್ತದೆ.  ಮೋಟಾರ್‌  ಸೈಕಲ್‌ ಸವಾರ  ರತ್ನಾಕರ  ರವರಿಗೆ  ತಲೆಗೆ, ಬಲಕೈಗೆ,ಎಡಭುಜಕ್ಕೆ  ಪೆಟ್ಟಾಗಿರುತ್ತದೆ. ಗಾಯಗೊಂಡವರನ್ನು  ಪಿರ್ಯಾದಿದಾರರು ಹಾಗೂ  ಸುಧೀಂದ್ರ  ಶೆಟ್ಟಿ  ರವರುಗಳು  ಚಿಕಿತ್ಸೆಗೆ  ಮಣಿಪಾಲ ಕೆ.ಎಮ್‌.ಸಿ. ಆಸ್ಪತ್ರೆಗೆ  ಕರೆದುಕೊಂಡು ಹೋಗಿ  ದಾಖಲಿಸಿರುತ್ತಾರೆ. ಈ ಬಗ್ಗೆ ಕೋಟ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2021  ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಮನುಷ್ಯ ಕಾಣೆ ಪ್ರಕರಣ

  • ಉಡುಪಿ: ಎಡ್ವರ್ಡ ಸೋನ್ಸ(56)  ಎಂಬವರು ಪ್ಯಾಟ್ ನಂಬ್ರ 302 ಬನ್ನಂಜೆ ಟವರ್ ಮೂಡನಿಂಡಬೂರು ಗ್ರಾಮ  ಎಂಬಲ್ಲಿ 2 ತಿಂಗಳಿಂದ ಒಂಟಿಯಾಗಿ ವಾಸವಿದ್ದು  ದಿನಾಂಕ: 03/03/2021 ರಂದು ಬೆಳಿಗ್ಗೆ 8:00 ಗಂಟೆಗೆ ಯಾರಿಗೂ ಹೇಳದೇ ಮನೆಯಿಂದ ಹೋಗಿದ್ದು ಎಲ್ಲಾ ಕಡೆಗಳಲ್ಲಿ ಹುಡುಕಿ ಸಂಬಂದಿಕರಲ್ಲಿ ವಿಚಾರಿಸಿದಲ್ಲಿ ಈ ವರೆಗೆ  ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಉಡುಪಿ ನಗರ  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-03-2021 10:23 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080