ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಫಿರ್ಯಾದಿ ಪ್ರೇಮ ಗಾಣಿಗ  ಇವರು ದಿನಾಂಕ 04/02/2023  ರಂದು  ಸಾಲಿಗ್ರಾಮದಿಂದ  ಅಂಕೋಲದಲ್ಲಿರುವ ನಾಟಿವೈದ್ಯರ ಮನೆಗೆ ಹೋಗಲು ಅವರ ತಮ್ಮನ ಮಗನಾದ ರಂಜಿತ್ ರವರ ಜೊತೆ ರಂಜಿತ್ ನ ಅಣ್ಣನ ಬಾಬ್ತು  KA 04 P 1925 ನೇ  ಮಾರುತಿ 800 ಕಾರಿನಲ್ಲಿ ಅವರ ಗಂಡ ಸುಬ್ರಾಯ ಗಾಣಿಗ, ರಂಜಿತ್ ನ ತಂದೆ ಬಾಬುಗಾಣಿಗ , ತಾಯಿ ಸುಶೀಲಾ ರವರೊಂದಿಗೆ ಹೋಗಿ ಚಿಕಿತ್ಸೆ ಪಡೆದು ವಾಪಾಸ್ಸು ಅಂಕೋಲದಿಂದ ಸಾಲಿಗ್ರಾಮಕ್ಕೆ ಕಾರಿನಲ್ಲಿ ಹೊರಟಿದ್ದು  ರಂಜಿತನು ಕಾರನ್ನು ಚಲಾಯಿಸಿಕೊಂಡಿದ್ದು  ಕಾರಿನ ಎದುರಿನ ಸೀಟಿನಲ್ಲಿ ಸುಶೀಲಾ ಹಾಗೂ ಹಿಂಬದಿಯ ಸೀಟಿನಲ್ಲಿ  ಫಿರ್ಯಾದುದಾರರು, ಅವರ ಗಂಡ ಸುಬ್ರಾಯ ಗಾಣಿಗ ಹಾಗೂ ಬಾಬು ಗಾಣಿಗರವರು ಕುಳಿತುಕೊಂಡಿರುತ್ತಾರೆ. ರಂಜಿತನು ಕಾರನ್ನು ರಾ ಹೆ 66 ರಲ್ಲಿ  ಅಂಕೋಲದಿಂದ ಚಲಾಯಿಸಿಕೊಂಡು ಬರುತ್ತಾ  ಶಿರೂರು ಗ್ರಾಮದ ಗ್ರೀನ್ ವ್ಯಾಲಿ ಶಾಲೆ ಬಳಿಯ ಚಿಲುಮೆ ಕ್ರಾಸ್  ಬಳಿ ಸಮಯ ಸುಮಾರು 15:45 ಗಂಟೆಗೆ ಹೋಗುತ್ತಿರುವಾಗ ಶಿರೂರು  ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿದ್ದ MH 50 N 9554 ನೇ ಲಾರಿಚಾಲಕನು ಯಾವುದೇ ಸೂಚನೆಯನ್ನು ನೀಡದೇ ಅಜಾಗರೂಕತೆಯಿಂದ ಆತನು ಚಲಾಯಿಸಿಕೊಂಡಿದ್ದ ಲಾರಿಗೆ  ಒಮ್ಮೇಲೆ ಬ್ರೇಕ್ ಹಾಕಿ ನಿಲ್ಲಿಸಿದ ಕಾರಣ ಫಿರ್ಯಾದುದಾರರು ಪ್ರಯಾಣಿಸುತ್ತಿದ್ದ   ಕಾರಿನ ಚಾಲಕ ರಂಜಿತ್ ನಿಗೆ ಕಾರಿನ ಹತೋಟಿ  ತಪ್ಪಿ ಲಾರಿಯ ಹಿಂಬದಿಗೆ ಡಿಕ್ಕಿ  ಹೊಡೆದ ಅಪಘಾತದ ಪರಿಣಾಮ ಫಿರ್ಯಾದುದಾರರ  ಎಡ ಕೈ ಬಳಿ ಜಖಂಗೊಂಡಿದ್ದು ಮೂಗಿನಲ್ಲಿ ರಕ್ತ ಬಂದಿದ್ದು ,ರಂಜಿತ್ ರವರ ಎಡ ಕೈ ಮತ್ತು ಎಡ ಬದಿಯ ಪಕ್ಕೆಲುಬು  ಬಳಿ ಒಳ ಜಖಂಗೊಂಡಿದ್ದು , ಫಿರ್ಯಾದುದಾರರ ಗಂಡ  ಸುಬ್ರಾಯ ಗಾಣಿಗ ಮತ್ತು  ರಂಜಿತ್ ನ ತಂದೆ ಬಾಬು ಗಾಣಿಗ ಹಾಗೂ ತಾಯಿ ಸುಶೀಲಾರವರಿಗೆ ಕೈ  ಕಾಲುಗಳು ಜಖಂಗೊಂಡಿದ್ದು , ತಲೆಗೆ ತೀವ್ರ ತರಹದ ರಕ್ತಗಾಯ ಉಂಟಾಗಿರುತ್ತದೆ. ಗಾಯಗೊಂಡವರನ್ನು ಸಾರ್ವಜನಿಕರು  ಐ ಆರ್ ಬಿ ಅಂಬುಲೆನ್ಸ್ ನಲ್ಲಿ  ಚಿಕಿತ್ಸೆ ಬಗ್ಗೆ  ಬೈಂದೂರು ಸರಕಾರಿ ಆಸ್ಪತ್ರೆಗೆ  ಕಳುಹಿಸಿದ್ದು ಅಲ್ಲಿನ ವೈದ್ಯರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆನೀಡಿ  ಹೆಚ್ಚಿನ ಚಿಕಿತ್ಸೆ  ಬಗ್ಗೆಮಣಿಪಾಲಕ್ಕೆ ಹೋಗಲು ತಿಳಿಸಿದ ಮೇರೆಗೆ 108 ವಾಹನದಲ್ಲಿ  ಕೆ ಎಂ ಸಿ ಮಣಿಪಾಲಆಸ್ಪತ್ರೆಗೆ ಹೋದಲ್ಲಿ ಗಾಯಾಳುಗಳನ್ನು ವೈದ್ಯರು ಪರೀಕ್ಷೀಸಿ  ಒಳರೋಗಿಯಾಗಿ ದಾಖಲಿಸಿಕೊಂಡು ಗಾಯಾಳು ಸುಶೀಲ, ಬಾಬುಗಾಣಿಗ ಮತ್ತು ಸುಬ್ರಾಯ ಗಾಣಿಗ ರವರಿಗೆ ತುರ್ತು  ನಿಗಾಘಟಕದಲ್ಲಿ ಚಿಕಿತ್ಸೆ  ನೀಡುತ್ತಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ : 22/2023 : ಕಲಂ 279,  337, 338  ಐಪಿಸಿರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿ ವಾದಿರಾಜ ತಿಂಗಳಾಯ ಇವರ ತಮ್ಮ ಪ್ರಕಾಶ ತಿಂಗಳಾಯ(48 ವರ್ಷ) ಎಂಬುವವರು ದಿನಾಂಕ 29-01-2023 ರಂದು ಸಂಜೆ 06:45 ಗಂಟೆ ಸಮಯಕ್ಕೆ ಕೊಡವೂರು ಜುಮಾದಿನಗರ ಎಂಬಲ್ಲಿ ತನ್ನ ಮನೆಯಲ್ಲಿ ಸೊಳ್ಳೆ ಓಡಿಸುವರೇ ಬೆಂಕಿ ಹಚ್ಚುತ್ತಿರುವ ಸಮಯ ಟರ್ಪೆಂಟ್ ಆಯಿಲ್ ಟಿನ್ ಆಕಸ್ಮಿಕವಾಗಿ ಬೆಂಕಿಗೆ ತಾಗಿ ಸ್ಪೋಟಗೊಂಡು ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ್ ಕೆ ಎಮ್ ಸಿ ಆಸ್ಪತ್ರಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿರುತ್ತ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 05-02-2023 ರಂದು ಬೆಳಗಿನ ಜಾವ 01:30 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಈ  ಬಗ್ಗೆ ಮಲ್ಪೆ ಠಾಣೆ ಯುಡಿಆರ್ ನಂ. 11/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ಪಿರ್ಯಾದಿ ನಸೀಮ ಬಾನು ಇವರ ಮಗ ಮಿಕ್‌ದಾದ್‌ ಮಹಮ್ಮದ್‌ ಆಲಿ, ಪ್ರಾಯ: 38 ವರ್ಷ, ಕಾರು ವ್ಯಾಪಾರ ಮಾಡಿಕೊಂಡಿರುತ್ತಾನೆ. ಈತನು  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 04/02/2023 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 05/02/2023 ರಂದು ಬೆಳಿಗ್ಗೆ 08:00 ಗಂಟೆ ನಡುವಿನ ಸಮಯದಲ್ಲಿ ಉಡುಪಿ ತಾಲೂಕು ಪುತ್ತೂರು ಗ್ರಾಮದ ವಾಸ್ತವ್ಯದ ಮನೆಯಲ್ಲಿನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ  ಬಗ್ಗೆ ಉಡುಪಿ ನಗರ ಠಾಣೆ ಯುಡಿಆರ್ ನಂ. 05/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 05-02-2023 06:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080