ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಕುಂದಾಪುರ: ಶ್ರೀಮತಿ ಭವಾನಿ ಶೆಡ್ತಿ ಇವರು ಕೊರ್ಗಿ ಗ್ರಾಮದ ಕೊರವಡಿಮನೆ ಎಂಬಲ್ಲಿ ವಾಸಮಾಡಿಕೊಂಡಿದ್ದು, ಸುಮಾರು 2 ತಿಂಗಳಿನಿಂದ ಭವಾನಿ ಶೆಡ್ತಿ ಅವರ ಮನೆಯಲ್ಲಿ ಮನೆಕೆಲಸ ಮಾಡಿಕೊಂಡಿದ್ದ ಶ್ರೀಮತಿ ಶಾಂತಕುಮಾರಿ @  ಶಾಂತಮ್ಮ ಎಂಬಾಕೆಯು ಭವಾನಿ ಶೆಡ್ತಿ ಇವರು ಮನೆಯಲ್ಲಿ ಇಟ್ಟಿದ್ದ ಕಪಾಟಿನ ಕೀ ಬಳಸಿ ಗೋದ್ರೆಜ್‌ ಕಪಾಟಿನಲ್ಲಿಟ್ಟಿದ್ದ 6 ಚಿನ್ನದ ಬಳೆಗಳು ಮತ್ತು ಒಂದು ಚಿನ್ನದ ಸರ ವನ್ನು ಕಳವು ಮಾಡಿ, ವಂಚಿಸುವ ಉದ್ದೇಶದಿಂದ ಕಳವು ಮಾಡಿದ ಆಭರಣ ಮಾದರಿಯ ನಕಲಿ ಆಭರಣಗಳನ್ನು ಅದೇ ಸ್ಥಳದಲ್ಲಿ ಇಟ್ಟು ಕಳವು ಹಾಗೂ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 01/2022 ಕಲಂ:  381, 420 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ:  ಬ್ರಹ್ಮಾವರ  ತಾಲೂಕು ಕಾಡೂರು  ಗ್ರಾಮದ ಕಾಡೂರು ಹೆಗ್ಗಡ್ಡು ಎಂಬಲ್ಲಿ ವಾಸವಾಗಿರುವ ಗಣಪತಿ ಆಚಾರ್, ಪ್ರಾಯ: 40 ವರ್ಷ ಎಂಬವರು ಅವಿವಾಹಿತರಾಗಿದ್ದು, ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 04/01/2022 ರಂದು ರಾತ್ರಿ 12:00 ಗಂಟೆಯಿಂದ ದಿನಾಂಕ 05/01/2022 ರಂದು ಬೆಳಿಗ್ಗೆ 03:00 ಗಂಟೆಯ ಮಧ್ಯಾವಧಿಯಲ್ಲಿ ವಾಸದ ಮನೆಯಲ್ಲಿ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 01/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಉಡುಪಿ  ತಾಲೂಕು  ಪುತ್ತೂರು  ಗ್ರಾಮದ  ಮಾಯಾಗುಂಡಿ ರಸ್ತೆಯ  ' ಶ್ರೀದೇವಿ  ನಿಲಯ'ದ  ಬಾಡಿಗೆ  ಮನೆಯಲ್ಲಿ  ವಾಸವಿದ್ದ ಸುಬ್ರಹ್ಮಣ್ಯ ವಿ. (62 ವರ್ಷ) ರವರು ಸುಮಾರು  ಆರು ತಿಂಗಳಿನಿಂದ ಹೃದಯದ  ಮತ್ತು  ಕಿಡ್ನಿಯ  ಸಮಸ್ಯೆಯಿಂದ  ಬಳಲುತ್ತಿದ್ದವರು, ದಿನಾಂಕ:  05/01/2022ರಂದು ಬೆಳಿಗ್ಗೆ  8:00  ಗಂಟೆಯ ಸುಮಾರಿಗೆ  ಮನೆಯ  ಬಾತ್‌ರೂಮಿನಲ್ಲಿ  ಕುಸಿದು ಬಿದ್ದವರನ್ನು  ಚಿಕಿತ್ಸೆಯ  ಬಗ್ಗೆ  ಹೈಟೆಕ್‌ ಆಸ್ಪತ್ರೆಗೂನಂತರ  ಅಜ್ಜರಕಾಡು  ಜಿಲ್ಲಾಸ್ಪತ್ರೆಗೆ ಕರೆ ತಂದಲ್ಲಿ  ಬೆಳಿಗ್ಗೆ 9:00  ಗಂಟೆಯ ಸುಮಾರಿಗೆ  ಪರೀಕ್ಷಿಸಿದ ವೈದ್ಯರು ಸುಬ್ರಹ್ಮಣ್ಯ ವಿ ಇವರು  ಅದಾಗಲೇ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 02/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 04/01/2022 ರಂದು 21:00  ಗಂಟೆಗೆ ಹೆಬ್ರಿ ತಾಲೂಕು ಬೆಳ್ವೆ  ಗ್ರಾಮದ ಗೋಳಿಯಂಗಡಿ ಶ್ರೀ  ರಕ್ತೇಶ್ವರಿ ದೇವಸ್ಥಾನದ ಹತ್ತಿರ ಅಯ್ಯಪ್ಪ ಸ್ವಾಮಿ ಮಾಲೆ ವೃತಧಾರಿಯಾಗಿದ್ದ ಶಂಕರ (27) ಎಂಬವರು ಅಯ್ಯಪ್ಪ ಸ್ವಾಮಿ ಶರಣು ಕರೆಯುವ ವೇಳೆ ಒಮ್ಮೇಲೆ ಕುಸಿದು  ಬಿದ್ದವರನ್ನು  ಅಸ್ವಸ್ಥ ರಾದವರನ್ನು ಜೊತೆಗೆ ಇದ್ದವರು    ಚಿಕಿತ್ಸೆಗೆ  ಹಾಲಾಡಿ ದುರ್ಗಾ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅವರು ಚಿಕಿತ್ಸೆಗೆ ಬರುವಾಗಲೇ ದಾರಿಯಲ್ಲಿ  ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 01/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 05-01-2022 05:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080