ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ 

  • ಬೈಂದೂರು: ಪಿರ್ಯಾದಿದಾರರಾದ ಸುಮಯ್ಯ ಬಾನು (33), ಗಂಡ ಅಬ್ದುಲ್ ವಹಾಬ್ ಮುಲ್ಲಾ, ವಾಸ; ಸುಲ್ತಾನ್ ಸ್ಟ್ರೀಟ್ ತಾರಾಪತಿ ಕಂಪೌಂಡ್ , ಶಿರೂರು ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ :24/12/2006 ರಂದು 3ನೇ ಆಪಾದಿತ ಅಬ್ದುಲ್ ವಹಾಬ್ ಮುಲ್ಲಾ ಇವರನ್ನು ಮದುವೆಯಾಗಿದ್ದು, ಅವರಿಗೆ ಇಬ್ಬರು ಮಕ್ಕಳಿರುತ್ತಾರೆ. ಪಿರ್ಯಾದಿದಾರರ ಗಂಡನಾದ 3ನೇ ಆಪಾದಿತನು ವಿದೇಶಕ್ಕೆ ಹೋದ ಮೇಲೆ ಆಪಾದಿತನ ಮನೆಯವರು ಪಿರ್ಯಾದಿದಾರರಿಗೆ ಕಿರುಕುಳ ಕೊಡಲು ಪ್ರಾರಂಭಿಸಿದ್ದರಿಂದ ಪಿರ್ಯಾದಿದಾರರು ಅವರ ತಾಯಿ ಮನೆಗೆ ಹೋಗಿದ್ದು 3ನೇ ಆಪಾದಿತನು ಪಿರ್ಯಾದಿದಾರಿಗೆ ಹಾಗೂ ಅವರ ಮಕ್ಕಳಿಗೆ ಜೀವನಾಂಶ ನೀಡದೇ ಇದ್ದು ಈ ಬಗ್ಗೆ ಪಿರ್ಯಾದಿದಾರರು ಕುಂದಾಪುರ ನ್ಯಾಯಾಲಯದಲ್ಲಿ ಜೀವನಾಂಶ ಪ್ರಕರಣ ದಾಖಲಿಸಿದ್ದು ವಿಚಾರಣೆಯಲ್ಲಿರುತ್ತದೆ. ಪಿರ್ಯಾದಿದಾರರ ಮಗನಿಗೆ ಕಿಡ್ನಿಗೆ ಸಂಬಂಧಿಸಿದ ಕಾಯಿಲೆ ಉಲ್ಬಣಗೊಂಡಿದ್ದು ಚಿಕಿತ್ಸೆಯ ಬಗ್ಗೆ ಹಣ ಕೇಳಲು ಪಿರ್ಯಾದಿದಾರರು ತನ್ನ ತಾಯಿಯೊಂದಿಗೆ ದಿನಾಂಕ 04/11/2021 ರಂದು ಬೆಳಿಗ್ಗೆ ಸಮಯ 10.00 ಗಂಟೆಗೆ ಗಂಡನ ಮನೆಯಾದ 3 ನೇ ಆಪಾದಿತನ ಮನೆಗೆ ಹೋಗಿದ್ದು ಆ ಸಮಯ ಆಪಾದಿತ 1. ಅಹ್ಮದ್ ಬಾಷಾ ಮುಲ್ಲಾ, 2.ಇಬ್ರಾಹಿಂ ಮುಲ್ಲಾ,3. ಅಬ್ದುಲ್ ವಹಾಬ್ ಮುಲ್ಲಾ, 4.ಜುಬೇದಾ ಖಾತೂನ್, 5.ತೌಸಿಯಾ ಮುಲ್ಲಾ, 6. ಸಾಧಿಕಾ ಇವರು ಮನೆಯಲ್ಲಿದ್ದು, ಪಿರ್ಯಾದಿದಾರರು ಒಳಗೆ ಹೋಗಿ ವಿಷಯವನ್ನು ಹೇಳಿದ್ದು ಕೂಡಲೇ 3 ನೇ ಆಪಾದಿತನು ಪಿರ್ಯಾದಿದಾರರಿಗೆ ಮನೆಯಿಂದ ಹೊರಗೆ ಹೋಗುವಂತೆ ಬೆದರಿಸಿದ್ದು, ಆಪಾದಿತರೆಲ್ಲ ಸೇರಿ ಹಲ್ಲೆ ಮಾಡಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 176/2021 ಕಲಂ: 354, 114, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 

 

ಇತ್ತೀಚಿನ ನವೀಕರಣ​ : 04-11-2021 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080