Feedback / Suggestions

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 01/08/2021ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರಾದ ಮಂಜುನಾಥ್ (48), ತಂದೆ: ಅಣ್ಣಮಲೈ, ವಾಸ: 4-690(49) ನೇತಾಜಿ ನಗರ, 4ನೇ ಅಡ್ಡ ರಸ್ತೆ, 80 ಬಡಗಬೆಟ್ಟು ಗ್ರಾಮ, ಮಣಿಪಾಲ ಉಡುಪಿ ತಾಲೂಕು ಇವರು ತನ್ನ KA-20-EG-8664 ನೇ ಸ್ಕೂಟರ್ ನಲ್ಲಿ ಮನೆಯಿಂದ ಹೊರಟು ರಾಜೀವ ನಗರ ತಲುಪಿದಾಗ ಅವರ ಪರಿಚಯದ ಕೃಷ್ಣ @ ಶೇಟ್ ಎಂಬುವರರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಅಲೆವೂರು-ಮಣಿಪಾಲ ರಸ್ತೆಯಲ್ಲಿ ಮಣಿಪಾಲದ ಕಡೆಗೆ ಹೋಗುತ್ತೀದ್ದಾಗ ರಾಹುಲ್ ನಗರ ಆಟೋ ರಿಕ್ಷಾ ನಿಲ್ದಾಣದ ಬಳಿ ತಲುಪುತ್ತಿದಂತೆ KA-20-EW-8329 ನೇ ಬೈಕ್ ನ ಸವಾರ ಭರತ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದರರು ಸವಾರಿ ಮಾಡಿಕೊಂಡು ಹೊಗುತಿದ್ದ KA-20-EG-8664 ನೇ ಸ್ಕೂಟರಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಎರಡೂ ವಾಹನದ ಸವಾರರು ಸ್ಕೂಟರ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲ ಗೈ ಗೆ ತರಚಿದ ಗಾಯ ಮತ್ತು ಬಲಕಾಲಿನ ಮೂಳೆ ಮುರಿತ ಉಂಟಾಗಿರುತ್ತದೆ. ಸಹ ಸವಾರರಾದ ಕೃಷ್ಣ ಎಂಬುವವರಿಗೆ ಕಾಲಿಗೆ ಗಾಯ ವಾಗಿರುತ್ತದೆ. ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 99/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣಗಳು

  • ಉಡುಪಿ: ಪಿರ್ಯಾದಿದಾರರಾದ ಅಂಬೆರ್ ಕರ್ ಮೋಹನ್ ಬಾಬು .ವಿ (43), ತಂದೆ: ವಿಠಲ್ ರಾವ್,ವಾಸ: ಅಸೋಸಿಯೇಟ್ ಫ್ರೋಪೆಸರ್, Pharmacology Department, KMC, ಮಣಿಪಾಲ ಇವರು SBI Bank ಮಣಿಪಾಲ ಶಾಖೆಯಲ್ಲಿ ಎಸ್.ಬಿ ಖಾತೆ ಹೊಂದಿದ್ದು, ದಿನಾಂಕ 03/08/2021 ರಂದು ಪಿರ್ಯಾದಿದಾರರಿಗೆ ಯಾರೋ ಅಪರಿಚಿತರು ಮೇಸೇಜ್ ಸಂದೇಶ ಮಾಡಿ ಬ್ಯಾಂಕ್ ಖಾತೆಯ ಕೆವೈಸಿ ಅಪ್‌ ಡೇಟ್‌ ಮಾಡುವಂತೆ ಲಿಂಕ್‌ ಕಳುಹಿಸಿದ್ದು, ಲಿಂಕ್‌ ಕ್ಲಿಕ್ ಮಾಡಿದಾಗ ಪಿರ್ಯಾದಿದಾರರ ಎಸ್.ಬಿ.ಐ ಬ್ಯಾಂಕ್‌ ಖಾತೆಯಿಂದ 2 ಸಲ ಟ್ರಾನ್ಸ್ ಕ್ಷನ್ ಮಾಡಿ ರೂಪಾಯಿ 20,000/-,ಹಾಗೂ 13,500/- ರೂಪಾಯಿಯಂತೆ ಒಟ್ಟು 33,500/- ಹಣವನ್ನು ವಿದ್ ಡ್ರಾ ಆಗಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2021 ಕಲಂ:66(c), 66(d) ಐ.ಟಿ. ಆಕ್ಟ್ ಮತ್ತು ಕಲಂ : 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಲಿನೆಟ್‌ ಸೀಮಾ ರೊಡ್ರಿಗಸ್‌ (38), ಗಂಡ: ರೋಶನ್‌ ಸಲ್ದಾನ, ವಾಸ: ಬ್ಯಾಂಕ್‌ ಆಫ್‌ ಬರೋಡದ ಎದುರು, ಶಂಕರಪುರ ಅಂಚೆ, ಉಡುಪಿ ತಾಲೂಕು ಇವರು ಕುವೈಟ್‌ ದೇಶದಲ್ಲಿ ಉದ್ಯೋಗದಲ್ಲಿದ್ದು, ದಿನಾಂಕ 19/05/2021 ರಂದು ಫೇಸ್‌ಬುಕ್‌ ಮೂಲಕ ಆರೋಪಿ ಡಾ. ಆ್ಯಂಡ್ರಿವ್‌ ಫೆಲಿಕ್ಸ್‌ ಎಂಬುವವರ ಪರಿಚಯ ಆಗಿದ್ದು, ಆರೋಪಿಯು ತಾನು ಡಾಕ್ಟರ್‌ ಆಗಿದ್ದು, ದೆಹಲಿಗೆ ಬಂದು ಒಂದು ಫಾರ್ಮಸಿಯನ್ನು ತೆರೆಯುತ್ತೇನೆ ಎಂದು ಪಿರ್ಯಾದುದಾರರನ್ನು ನಂಬಿಸಿ ಪಿರ್ಯಾದಿದಾರರೊಂದಿಗೆ ವಾಟ್ಸಪ್‌ ನಿಂದ ಸಂಪರ್ಕ ಹೊಂದಿ, ಪಿರ್ಯಾದಿದಾರರಿಂದ ಹಂತ ಹಂತವಾಗಿ ರೂಪಾಯಿ 19 ಲಕ್ಷ ಹಣವನ್ನು ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಂಡು ಮೋಸ ಹಾಗೂ ನಂಬಿಕೆ ದ್ರೋಹ ಎಸಗಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 107/2021 ಕಲಂ: 406, 419, 420, 467, 468, 471, 120(b) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 04-08-2021 02:59 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080