ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 03/08/2021 ರಂದು ಪಿರ್ಯಾದಿದಾರರಾದ ಇಲಿಯಾಸ್ (35), ತಂದೆ: ರಜಾಬ್ ಬ್ಯಾರಿ, ವಾಸ: ನೆಬ್ರಾಜ್ ಮಂಜಿಲ್, ಕೋಡಿ ರಸ್ತೆ, ಗುಂಡ್ಮಿ ಗ್ರಾಮ, ಸಾಸ್ತಾನ, ಬ್ರಹ್ಮಾವರ ತಾಲೂಕು ಇವರು ತನ್ನ ಸಂಬಂಧಿ ರಶೀದ್ ಎಂಬುವವರ ಮಾಲಕತ್ವದ KA-20-AA-5350 ನೊಂದಣಿ ನಂಬ್ರದ ಆಪೇ ಸಿಟಿ ಪ್ಯಾಸೆಂಜರ್ ರಿಕ್ಷಾದಲ್ಲಿ ಚಾಲಕನಾಗಿ ಅವರ ಪರಿಚಯದ ಕಳುವಿನಕಟ್ಟೆ, ಐರೋಡಿ ವಾಸಿ ಮಹೇಶ್ ಆಚಾರ್ಯ ರವರನ್ನು ಬಾಡಿಗೆಯಲ್ಲಿ ಬ್ರಹ್ಮಾವರಕ್ಕೆ ಕರೆದುಕೊಂಡು ಹೋಗಿ ಕೆಲಸ ಮುಗಿಸಿ ವಾಪಾಸ್ಸು ಬ್ರಹ್ಮಾವರ ದಿಂದ ಮಹೇಶ್ ಆಚಾರ್ಯರವರ ಮನೆಯಾದ ಐರೋಡಿಗೆ ಹೊರಟು ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ-ಕುಂದಾಪುರ ಏಕಮುಖ ರಸ್ತೆಯಲ್ಲಿ ಹೋಗುತ್ತಾ ವಾರಂಬಳ್ಳಿ ಗ್ರಾಮದ, ಉಪ್ಪಿನಕೋಟೆ, ಶಿಲುಬೆ ಕ್ರಾಸ್ ಎಂಬಲ್ಲಿ ರಾತ್ರಿ 9:45 ಗಂಟೆಗೆ ತಲುಪುವಾಗ ಆರೋಪಿ KA-20-D-1733 ನೇ ನಂಬ್ರದ ಟಾಟಾ ಕಂಪೆನಿಯ ವ್ಯಾನ್‌(ಹಾಲಿನ ವಾಹನ)ನನ್ನು ಹಾರಾಡಿ- ಉಪ್ಪಿನಕೋಟೆ ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ಉಪ್ಪಿನಕೋಟೆಯಿಂದ ಕುಂದಾಪುರ ಕಡೆಗೆ ಹೋಗಲು ಅತೀವೇಗ ಹಾಗೂ ಅಜಾಗರೂಕತೆಯಿಂದ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಚಲಾಯಿಸಿ ಕುಂದಾಪುರ ಕಡೆಗೆ ವಾಹನವನ್ನು ತಿರುಗಿಸುವಾಗ ಹಾಲಿನ ವಾಹನದ ಬಲಭಾಗ ಪಿರ್ಯಾದಿದಾರರ ಆಟೋ ರಿಕ್ಷಾದ ಎಡಭಾಗಕ್ಕೆ ಡಿಕ್ಕಿ ಹೊಡೆದು ರಿಕ್ಷಾ ಹಾಲಿನ ವಾಹನದ ಹಿಂಭಾಗಕ್ಕೆ ಸಿಕ್ಕಿ ಹಾಕಿಕೊಂಡು ರಿಕ್ಷಾವನ್ನು ಹಾಲಿನ ವಾಹನ ಎಳೆದುಕೊಂಡು ಹೋಗಿದ್ದು ತಕ್ಷಣ ಆರೋಪಿಯು ತನ್ನ ವಾಹನವನ್ನು ನಿಲ್ಲಿಸಿರುತ್ತಾನೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ಹಾಗೂ ಪ್ರಯಾಣಿಕ ಮಹೇಶ್ ಆಚಾರ್ಯ ರವರು ರಿಕ್ಷಾದ ಒಳಗೆ ಸಿಕ್ಕಿಹಾಕಿಕೊಂಡು ಪಿರ್ಯಾದಿದಾರರ ಮೂಗಿಗೆ, ಎಡಕಣ್ಣಿನ ಬಳಿ, ರಕ್ತಗಾಯ ಆಗಿರುತ್ತದೆ. ಮಹೇಶ್ ಆಚಾರ್ಯ ರವರ ತಲೆಗೆ, ಎಡದವಡೆಗೆ, ಎಡಕೈ, ಎಡಕಾಲಿಗೆ ರಕ್ತಗಾಯ ಉಂಟಾಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹಾಗೂ ಮಹೇಶ್ ಆಚಾರ್ಯ ರವರಿಗೆ ಬ್ರಹ್ಮಾವರ ಪ್ರಣವ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಇಬ್ಬರನ್ನೂ ಕೂಡ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಪಿರ್ಯಾದಿದಾರರು ದಿನಾಂಕ 04/08/2021 ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 149/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾದ ಸುಕಿ ಶೆಟ್ಟಿ (42), ತಂದೆ: ಚಂದ್ರ ಶೇಖರ ಶೆಟ್ಟಿ, ವಾಸ: ಸಮೃದ್ದಿ ನಿಲಯ ಸರಕಾರಿ ಹೆಲ್ತ್ ಸೆಂಟರ್ ಬಳಿ ಮಾರ್ಕೊಡು ಕೋಟೇಶ್ವರ ಗ್ರಾಮ ಕುಂದಾಪುರ ತಾಲೂಕು ಇವರ ಬಾವ ಡಾ.ಜಿ. ಎಸ್ ವಿವೇಕಾನಂದ ಶೆಟ್ಟಿ(57) ರವರು ಕೊಲ್ಲೂರು ಪ್ರಾಥಮಿಕ ಪಶು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಗಿದ್ದು ವಿಪರೀತ ಮದುಮೇಹ ಖಾಯಿಲೆಯಿಂದ ಬಳಲುತ್ತಿದ್ದವರು ಅದೇ ಕಾರಣದಿಂದ ಅಥವಾ ವೈಯಕ್ತಿಕ ಕಾರಣಗಳಿಂದ ಮನನೊಂದು ದಿನಾಂಕ 03/08/2021 ರಂದು ಸಂಜೆ 06:00 ಗಂಟೆಯಿಂದ ದಿನಾಂಕ 04/08/2021 ರಂದು ಬೆಳಗಿನ ಜಾವ 02:00 ಗಂಟೆಯ ಮಧ್ಯಾವಧಿಯಲ್ಲಿ ಕೊಲ್ಲೂರು ಪ್ರಾಥಮಿಕ ಪಶು ಆಸ್ಪತ್ರೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಒಳಗಿನಂದ ಚಿಲಕ ಹಾಕಿಕೊಂಡು ಆಸ್ಪತ್ರೆಯ ಸ್ಟಾಕ್ ರೂಮ್ ನಲ್ಲಿ ಬ್ಲೆಡ್ ನಿಂದ ಕುತ್ತಿಗೆ ಕೂಯ್ದಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-08-2021 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080