ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ರೂಪೇಶ್ (26), ತಂದೆ: ಗೋಪಾಲ, ವಾಸ: ಮಂಜುಶ್ರೀ ಕಾಲೋನಿ ಬಳಿ, ದೆಪುತ್ತೆ, ಮರ್ಣೆ ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 03/06/2022 ರಂದು ಮಹೇಶ್ ಪೂಜಾರಿ ಮಾಲೀಕತ್ವದ KA-20-AB-4156 ನೇ ನೋಂದಣಿ ಸಂಖ್ಯೆಯ TATA  INTRA  ವಾಹನವನ್ನು ಜೋಡುರಸ್ತೆ ಕಡೆಯಿಂದ ಹೆಬ್ರಿ ಕಡೆಗೆ ಹಾದುಹೋಗುವ ರಾಜ್ಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಸಂಜೆ 5:45 ಗಂಟೆಗೆ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ತಲುಪಿ ಮಹೇಶ್ ಪೂಜಾರಿ ರವರ ಮನೆ ಕಡೆಗೆ ಮಣ್ಣು ರಸ್ತೆಗೆ ಟರ್ನ್ ಮಾಡುತ್ತಿರುವಾಗ ಜೋಡು ರಸ್ತೆ ಕಡೆಯಿಂದ ಹೆಬ್ರಿ ಕಡೆಗೆ KA-20-ES-7356 ನೇ ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ ನ್ನು ಭರತ್  ಸವಾರನಾಗಿ ಸಹಸವಾರನಾಗಿ ಮ್ಯಾನ್ಲಿ ಸೋನ್ಸ್ ರವರನ್ನು ಕುಳ್ಳಿರಿಸಿಕೊಂಡು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಓಮ್ಮೆಲೆ ಬ್ರೇಕ್ ಹಾಕಿದ್ದು, ಮೋಟರ್ ಸೈಕಲ್ ಜಾರಿಕೊಂಡು ಹೋಗಿ  ಪಿರ್ಯಾದಿದಾರರು ಚಲಾಯಿಸುತ್ತಿದ್ದ ಗೂಡ್ಸ್ ವಾಹನದ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಮೋಟರ್ ಸೈಕಲ್ ಸವಾರ ಭರತ್ ನ ಬಲಕೈ ಮೂಳೆ ಮುರಿತಗೊಂಡು, ಬಲತೊಡೆಗೆ, ತಲೆಗೆ ಗುದ್ದಿದ ಒಳ ಜಖಂ ಆಗಿರುತ್ತದೆ. ಹಾಗೂ ಮೋಟರ್ ಸೈಕಲ್ ನ ಸಹಸವಾರ ಮ್ಯಾನ್ಲಿ ಸೋನ್ಸ್ ಪ್ರಜ್ಞಾಹೀನನಾಗಿದ್ದು, ಎಡಕೈ ಮೂಳೆ ಮುರಿತಗೊಂಡಿದ್ದು ತಲೆಗೆ ರಕ್ತಗಾಯವಾಗಿರುತ್ತದೆ. ಚಿಕಿತ್ಸೆ ಬಗ್ಗೆ ಕಾರ್ಕಳ ಸಿಟಿ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿದೆ. ಘಟನಾ ಸಮಯ ಮೋಟರ್ ಸೈಕಲ್ ಸವಾರ ಹಾಗೂ ಸಹಸವಾರ ಹೆಲ್ಮೇಟ್ ಧರಿಸಿರುವುದಿಲ್ಲ. ಹೆಲ್ಮೆಟ್ ನ್ನು ಮೋಟರ್ ಸೈಕಲ್ ಮುಂಭಾಗ ಇಟ್ಟುಕೊಂಡು ಸವಾರಿ ಮಾಡಿರುತ್ತಾರೆ. ಈ ಬಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 83/2022  ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 03/06/2022 ರಂದು ಮಧ್ಯಾಹ್ನ 3:15 ಗಂಟೆಗೆ ಕಾರ್ಕಳ ತಾಲೂಕು, ಇರ್ವತ್ತೂರು ಗ್ರಾಮದ ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ತಿರುವಿನಲ್ಲಿ ಹಾದು ಹೋಗುವ ಇರ್ವತ್ತೂರು-ಮುರತ್ತಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ವಿಜೇಂದ್ರ ಪೂಜಾರಿ ಎಂಬುವವರು ಮೋಟಾರು ಸೈಕಲ್ ನಂಬ್ರ KA-20-EC-4560 ನೇಯದರಲ್ಲಿ ಪಿರ್ಯಾದಿದಾರರಾದ ಗಣೇಶ ಇವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಇರ್ವತ್ತೂರು ಕಡೆಯಿಂದ ಮುರತ್ತಂಗಡಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಆತನ ತೀರಾ ಬಲಬದಿಗೆ ಸವಾರಿ ಮಾಡಿಕೊಂಡು ಹೋಗಿ, ಮುರತ್ತಂಗಡಿ ಕಡೆಯಿಂದ ಇರ್ವತ್ತೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನಂಬ್ರ KA-20-ED-568 ನೇಯದಕ್ಕೆ ಢಿಕ್ಕಿ ಹೊಡೆದು ಮೋಟಾರು ಸೈಕಲ್‌‌‌ಗಳು ಸವಾರರ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಾಧ ಗಣೇಶ (32), ತಂದೆ: ಕಿಟ್ಟು, ವಾಸ: ಲಕ್ಷ್ಮೀಛಾಯಾ, ಮಳಿಯಾಲ್ ಕಟ್ಟೆ, ಇರ್ವತ್ತೂರು ಅಂಚೆ ಮತ್ತು ಗ್ರಾಮ, ಕಾರ್ಕಳ ಇವರ ಎಡಭುಜಕ್ಕೆ ಒಳಜಖಂ, ಬಲಕಾಲಿನ ಪಾದ ಮತ್ತು ಹಣೆಯ ಬಲಬದಿ ರಕ್ತ ಗಾಯ ಹಾಗೂ ಬಲಕಾಲಿನ ಮೊಣಗಂಟಿಗೆ ಗುದ್ದಿದ ನೋವು ಆಗಿದ್ದು, ಅಲ್ಲದೆ ಮೋಟಾರು ಸೈಕಲ್ ನಂಬ್ರ KA-20-ED-568 ನೇಯದರ ಸವಾರ ಪ್ರಕಾಶ ಆಚಾರ್ಯ ಇವರ ಬಲಕಾಲಿನ ಮೊಣಗಂಟಿಗೆ ತೀವೃ ಗಾಯ ಮತ್ತು ಬಲಬದಿಯ ಭುಜಕ್ಕೆ ಗುದ್ದಿದ ನೋವು ಆಗಿರುತ್ತದೆ . ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 77/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದದಾರರಾದ ಮಣಿವಣ್ಣನ್‌ (63), ತಂದೆ: ಜಯಪಾಲ್‌, ವಾಸ: ಮನೆನಂಬ್ರ  5-22-ಸಿ,  ವಾಸುಕಿ  ನಗರ 5ನೇ ಅಡ್ಡರಸ್ತೆ,  ಬೈಲೂರು, 76ನೇ  ಬಡಗುಬೆಟ್ಟು  ಗ್ರಾಮ, ಉಡುಪಿ  ಜಿಲ್ಲೆ ಇವರೊಂದಿಗೆ  ವಾಸವಿದ್ದ ಅವರ ಕಿರಿಯ ಮಗ ಸುಮೇಶ್‌ ಎಂ. (33)  ಅವಿವಾಹಿತನಾಗಿದ್ದು,  ಕಳೆದ  3-4 ತಿಂಗಳಿನಿಂದ  ಮಾನಸಿಕ  ಖಿನ್ನತೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ  ಹೊಂದಿ,  ದಿನಾಂಕ 03/06/2022 ರಂದು  ಸಂಜೆ  4:30  ಗಂಟೆಯಿಂದ  5:30  ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಅಡುಗೆ  ಕೋಣೆಯ  ಮಾಡಿನ  ಮರದ  ಜಂತಿಗೆ  ನೈಲಾನ್‌  ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 32/2022 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 04-06-2022 05:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080