ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ:  ಫಿರ್ಯಾದಿ ರಾಮಚಂದ್ರ ಇವರು ಟಾಟಾ ಏಸ್‌ ವಾಹನ ಚಾಲಕನಾಗಿದ್ದು, ದಿನಾಂಕ: 02.04.2023 ರಂದು ಸಂಜೆ ಸಮಯ ಬಾಡಿಗೆಯ ಸಲುವಾಗಿ ಸಾಯಿಬ್ರಕಟ್ಟೆ ಕಡೆಯಿಂದ ಕೋಟ ಹೈಸ್ಕೂಲ್‌ ಕಡೆಗೆ ಹೋಗುತ್ತಿರುವಾಗ, ಸಂಜೆ 7:00 ಗಂಟೆ ಸುಮಾರಿಗೆ ವಡ್ಡರ್ಸೆ ಗ್ರಾಮ ಪಂಚಾಯತ್‌ ಕಛೇರಿಯಿಂದ ಸ್ವಲ್ಪ ಮುಂದೆ ಆರೋಪಿ ಸವಾರ ಪ್ರತ್ವೀಶ್‌ ಎಂಬಾತನು ತನ್ನ ಬಾಬ್ತು ನಂ: KA 20 EY 3122 ನೇ Yamaha ಮೋಟಾರ್‌ ಸೈಕಲ್‌ ಅನ್ನು ಕೋಟ ಹೈಸ್ಕೂಲ್‌ ಕಡೆಯಿಂದ ಸಾಯಿಬ್ರಕಟ್ಟೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಸೂರಪ್ಪ ಶೆಟ್ರ ಮನೆಗೆ ಹೋಗುವ ರಸ್ತೆಯು ಸಂಪರ್ಕ ಹೊಂದುವ ಕೋಟ ಹೈಸ್ಕೂಲ್‌ - ಸಾಯಿಬ್ರಕಟ್ಟೆ ರಸ್ತೆ ಜಂಕ್ಷನ್‌ ಬಳಿ ನಿಂತಿದ್ದ ಪಾದಾಚಾರಿ ಕೃಷ್ಣ ದೇವಾಡಿಗ (82 ವರ್ಷ) ಎಂಬವರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಕೃಷ್ಣ ದೇವಾಡಿಗ ರವರ ತಲೆಗೆ ಮತ್ತು ಕೈಕಾಲುಗಳಿಗೆ ತೀವ್ರ ರಕ್ತಗಾಯ ಹಾಗೂ ಬೈಕ್‌ ಸವಾರ ಪ್ರತ್ವೀಶ್‌ ರವರಿಗೆ ಸಣ್ಣಪುಟ್ಟ ರಕ್ತಗಾಯಗಳಾಗಿರುತ್ತದೆ. ಗಾಯಾಳು ಕೃಷ್ಣ ದೇವಾಡಿಗ ರವರು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೂ ಮತ್ತು ಆ ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೂ ಹಾಗೂ ಬೈಕ್‌ ಸವಾರ ಪ್ರತ್ವೀಶ್‌ ರವರು ಚಿಕಿತ್ಸೆಯ ಬಗ್ಗೆ ಕೋಟೇಶ್ವರದ ಎನ್‌.ಆರ್‌. ಆಚಾರ್ಯ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 54/2023  ಕಲಂ: 279, 338   ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಉಡುಪಿ: ಪಿರ್ಯಾದಿ ಜಯಲಕ್ಷ್ಮಿ ಇವರ 2ನೇ ಮಗ ವಿಜೇತ ಪ್ರಾಯ: 26 ವರ್ಷ ರವರು ತೆಲಂಗಾಣದಲ್ಲಿ ಹೋಟೇಲ್‌ ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 02/03/2023 ರಂದು ಊರಿಗೆ ಬಂದಿದ್ದು, ದಿನಾಂಕ 13/03/2023 ರಂದು ಪುನಃ ತೆಲಂಗಾಣಕ್ಕೆ ಹೋಗುತ್ತೇನೆಂದು ಹೋಗಿ, ಅಲ್ಲಿಗೆ ಹೋಗದೆ ಮನೆಗೂ ಬಾರದೇ ಕಾಣೆಯಾಗಿದ್ದು, ಪಿರ್ಯಾದುದಾರರ ಮೊದಲ ಮಗ ವಿಶ್ವನಾಥ ರವರು ದಿನಾಂಕ 16/03/2023 ರಂದು ವಿಜೇತನನ್ನು ಉಡುಪಿ ಬಸ್‌ ನಿಲ್ದಾಣದಲ್ಲಿ ನೋಡಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 44/2023ಕಲಂ: ಗಂಡಸು ಕಾಣೆಯಂತೆ  ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿ ದಾರರು  ಅಣ್ಣನಾದ ದಿ. ಫಿಸಿಯೆಲ್‌ ಸಾಲಿನ್ಸ್‌ ರವರ ಮಗನಾದ ಜಯಪ್ರಕಾಶ್‌ (53 ವರ್ಷ)  ರವರು  ಕುಂದಾಪುರ ನ್ಯಾಯಲಯದಲ್ಲಿ ವಕೀಲರಾಗಿ ಕೆಲಸ ಮಾಡಿಕೊಡಿದ್ದು, ದಿನಾಂಕ  03/04/2023 ರಂದು ಜಯಪ್ರಕಾಶ್ ಸಾಲೀನ್ಸ್  ರವರು  ಕೆಲಸದ ನಿಮಿತ್ತ  ಅವರ  ಕಾರಿನಲ್ಲಿ  ಉಡುಪಿಗೆ  ಹೋಗಿದ್ದರು.    ಸಮಯ  ಸುಮಾರು 14:10  ಗಂಟೆಗೆ ಕುಂದಾಪುರ  ತಾಲೂಕು  ಗೋಪಾಡಿ  ಗ್ರಾಮದ ಹೂವಿನಕೆರೆ ಬಳಿ  ಕಾರಿನಲ್ಲಿ  ಕುಳಿತವರು  ವಾಂತಿ ಮಾಡುತ್ತಿದ್ದು  ತೀವೃವಾಗಿ  ಅಸ್ವಸ್ಥ ರಾದವರನ್ನು  ಕೂಡಲೇ  ಅಲ್ಲಿಯ  ಆಟೋ  ಚಾಲಕರು  ಅವರನ್ನು  ಕೋಟೇಶ್ವರದ  ಎನ್‌ಆರ್‌  ಆಚಾರ್ಯ  ಆಸ್ಪತ್ರೆಗೆ    ಸುಮಾರು 14:20 ಗಂಟೆಗೆ  ಕರೆತಂದಾಗ  ಅಲ್ಲಿಯ  ವೈದ್ಯರು  ಜಯಪ್ರಕಾಶ್  ಸಾಲೀನ್ಸ್  ರವರನ್ನು  ಪರೀಕ್ಷಿಸಿ  ಮೃತ ಪಟ್ಟಿರುತ್ತಾರೆ  ಎಂದು  ತಿಳಿಸಿರುತ್ತಾರೆ.  ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 16/2023  ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-04-2023 10:13 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080