ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ: ದಿನಾಂಕ: 03/03/2023 ರಂದು  ಸಂಜೆ ಸುಮಾರು 04.10 ಗಂಟೆಯ ವೇಳೆಗೆ ಯೋಗಿಶ (15) ವರ್ಷ ಎಂಬಾತನು ಪೆರ್ಡೂರು ಮೇಲ್ಮೇಟೆ  ಬಿಎಮ್ ಶಾಲೆಯ ಎದುರು ಪೆರ್ಡೂರು ಪ್ರೌಡ ಶಾಲೆ ಕಡೆಯಿಂದ ರಾ.ಹೆದ್ದಾರಿ  169 (ಎ) ರಲ್ಲಿ  ರಸ್ತೆ ಬದಿಯಲ್ಲಿ ಪೆರ್ಡೂರು ಪೇಟೆ ಕಡೆ ನಡೆದುಕೊಂಡು ಹೋಗುತ್ತಿದ್ದಾಗ, ಸದ್ರಿ ರಸ್ತೆಯಲ್ಲಿ KA-14-Z-5503 ಕಾರನ್ನು ಅದರ ಚಾಲಕ   ಮಂಜು ಜಿ,ಎಸ್‌ಎಂಬಾತನು ಹೆಬ್ರಿ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡ ಬದಿಗೆ ಹೋಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯೋಗೀಶನಿಗೆ  ಹಿಂದಿನಿಂದ ಡಿಕ್ಕಿ ಹೊಡೆದನು ಡಿಕ್ಕಿ ಹೊಡೆದ ಪರಿಣಾಮ ಯೋಗೀಶ ಮೇಲೆಕ್ಕೆ ಹಾರಿ ಕಾರಿನ  ಎದುರು ಗ್ಲಾಸಿನ ಮೇಲೆ ಬಿದ್ದು ನಂತರ ಕೇಳಗೆ ನೆಲಕ್ಕೆ ಬಿದ್ದನು  ಅಪಘಾತದಿಂದ ಆತನ  ಮೂಗು , ಬಾಯಲ್ಲಿ ರಕ್ತ ಬರುತ್ತಿದ್ದು ಆತನು ತೀವ್ರ ಸ್ವರೂಪದ ಗಾಯಗೊಂಡಿದ್ದು ಮಾತನಾಡುತ್ತಿರಲಿಲ್ಲ ಆತನನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ, ಎಂ,ಸಿ ಆಸ್ಪತ್ರೆಗೆ  ದಾಖಲಿಸಲಾಗಿರುತ್ತದೆ.  ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 12/2023  ಕಲಂ: 279, 338 ಐಪಿಸಿರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

 

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಫಿರ್ಯಾದಿ ಪ್ರವೀಣ  ಶೆಟ್ಟಿ ಇವರ  ತಂದೆ, ವಿಠಲ್  ಶೆಟ್ಟಿ ಪ್ರಾಯ 70 ವರ್ಷ ಇವರು  ಕುಂದಾಪುರ  ತಾಲೂಕಿನ 28 ಹಾಲಾಡಿ  ಗ್ರಾಮದ  ಫಾರೆಸ್ಟ್‌ ಕಚೇರಿಯ ಬಳಿ ಅವರ ಮಗನೊಂದಿಗೆ ವಾಸವಾಗಿದ್ದು, ಅವರು ಈ ಹಿಂದೆ ಮೋಟಾರ್ ಸೈಕಲ್‌ನಲ್ಲಿ ಹೋಗು ವಾಗ  ಸ್ಕಿಡ್ ಆಗಿ ಬಿದ್ದು ಎರಡು ಕಾಲುಗಳಿಗೆ ನೋವಾಗಿದ್ದು,  ಈ  ಬಗ್ಗೆ  ಔಷಧಿ ಮಾಡಿದರೂ, ಕಾಲು ನೋವು ಕಡಿಮೆ ಆಗಿರಲಿಲ್ಲ, ಈ ಬಗ್ಗೆ ಜೀವನದಲ್ಲಿ ಜಿಗುಪ್ಸೆಗೊಂಡು ಸುಮಾರು 8 ತಿಂಗಳ ಹಿಂದೆ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದರು, ಆಗ ಊರಿನವರು ಹಾಗೂ ಮನೆಯವರು ಬುದ್ದಿ ಮಾತು  ಹೇಳಿರುತ್ತಾರೆ, ಅವರಿಗೆ ಆದ ಕಾಲು ನೋವು  ಈಗ ಉಲ್ಬಣ ಆಗಿದ್ದು, ಅದೇ ವಿಷಯದಲ್ಲಿ ಅವರು  ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ.03/03/2023 ರಂದು 22:30 ಗಂಟೆ ಯಿಂದ ದಿನಾಂಕ. 04./03/ 2023 ರಂದು 11;30 ಘಂಟೆಯ  ಮದ್ಯದ ಅವಧಿಯಲ್ಲಿ ಕುಂದಾಪುರ ತಾಲೂಕಿನ 28 ಹಾಲಾಡಿ ಗ್ರಾಮದ ಹಾಡಿಯಲ್ಲಿ ನೇರಳೆ ಮರಕ್ಕೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ  ಬಗ್ಗೆ ಶಂಕರನಾರಾಯಣ ಠಾಣೆ ಯುಡಿಆರ್‌  04/2023, ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 04-03-2023 05:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080