ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ನಾಗೇಶ ಶ್ರೀಯಾನ್ (46), ತಂದೆ : ಪೊಂಕು ಸಾಲ್ಯಾನ್, ವಾಸ : “ಸಾನ್ವಿ” ಮಟ್ಟು ಅಣೆಕಟ್ಟಿನ ಬಳಿ, ಮಟ್ಟು  ಗ್ರಾಮ ಕಟಪಾಡಿ ಅಂಚೆ ಕಾಪು ತಾಲೂಕು ಇವರ ಅಳಿಯ ಸಂದೇಶ ಶ್ರೀಯಾನ್ (29) ರವರು ದಿನಾಂಕ 30/11/2021 ರಂದು ತನ್ನ KA-20-EG-6362 ನೇ ಮೋಟಾರು ಸೈಕಲ್‌ನಲ್ಲಿ ಮಟ್ಟು ಕಡೆಯಿಂದ ಮಲ್ಪೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಉದ್ಯಾವರ ಗ್ರಾಮದ ಫಂಡರೀನಾಥ ಭಜನಾ ಮಂದಿರ ಬಳಿ  ತಲುತ್ತಿದ್ದಂತೆ ಅದೇ ರಸ್ತೆಯಲ್ಲಿ ಮಲ್ಪೆ ಕಡೆಯಿಂದ ಪ್ರಸಾದ ರವರು ಅವರ KA-20-EE-1985 ನೇ ಮೋಟಾರು ಸೈಕಲ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾತ್ರಿ 10:15 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಅಳಿಯ ಸಂದೇಶ ಶ್ರೀಯಾನ್ ರವರ ಮೋಟಾರು ಸೈಕಲ್ ನ ಎದುರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರಿಬ್ಬರೂ ಮೋಟಾರು ಸೈಕಲ್ ನ ಸಮೇತ ರಸ್ತೆಗೆ ಬಿದ್ದು, ಸಂದೇಶ ಶ್ರೀಯಾನ್ ರವರಿಗೆ ಎಡತೊಡೆಗೆ ಎಡಕೈಗೆ ಗಾಯವಾಗಿದ್ದು, ಅಲ್ಲಿ ಸೇರಿದವರು ಉಪಚರಿಸಿ ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ಅಲ್ಲಿನ ವೈದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 177/2021  ಕಲಂ: 279,  338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ದಿಲೀಪ್ ಸಾರಂಗ್ ಎಂ.ಆರ್ (29) , ತಂದೆ: ರಮೇಶ್ ಎಂ.ಆರ್, ವಾಸ : ಮನೆ ನಂಬ್ರ 54,ಹೆಚ್.ಎಸ್.ಬಿ.ಸಿ.ಎಸ್ ಲೇಔಟ್ ನಾರಾಯಣ ನಗರ, 2 ನೇ ಬ್ಲಾಕ್, ತಿಪ್ಪಸಂದ್ರ, ಬೆಂಗಳೂರು ಇವರು ದಿನಾಂಕ 27/11/2021 ರಂದು ಅವರ KA-05-NA-1992 ಹುಂಡೈ ಕ್ರೆಟ್ಟಾ ಕಾರಿನಲ್ಲಿ ಬೆಂಗಳೂರಿನಿಂದ ಕುಟುಂಬ ಸಮೇತ ಪ್ರವಾಸ ಹೊರಟು ಧರ್ಮಸ್ಥಳ, ಸಾಗರ, ಗೋಕರ್ಣ ಕಡೆಗಳಿಗೆ ಭೇಟಿ ನೀಡಿ ದಿನಾಂಕ 01/12/2021 ರಂದು ಗೋಕರ್ಣದಿಂದ ಮದ್ಯಾಹ್ನ ಹೊರಟು ಉಡುಪಿಗೆ ಬಂದು ರಾತ್ರಿ 11:00 ಗಂಟೆಗೆ ಮಣಿಪಾಲ ರಾಯಲ್ ಎಂಬೆಸಿ ಬಳಿಯ ಸ್ಕೈ ವೇ- ಇನ್ ನಲ್ಲಿನ ರೂಂ ನಲ್ಲಿ ತಂಗಲು ಡಿ.ಸಿ.ಕಚೇರಿ ರಸ್ತೆಯ ರಾಯಲ್ ಅಂಬೆಸಿ ಬಳಿ ರಸ್ತೆ ಬದಿಯಲ್ಲಿ ಕಾರಿನ ಪಾರ್ಕಿಂಗ್ ಲೈಟ್ ನ್ನು ಹಾಕಿ ಕಾರನ್ನು ನಿಲ್ಲಿಸಿದ್ದು, ಆ ಸಮಯದಲ್ಲಿ ಸಿಂಡಿಕೇಟ್ ಸರ್ಕಲ್ ಕಡೆಯಿಂದ ಕಾಯಿನ್ ಸರ್ಕಲ್ ಕಡೆಗೆ KA-20-EB-7559 ನೇ ಪಲ್ಸರ್ ಮೋಟಾರು ಸೈಕಲಿನಲ್ಲಿ ಒಬ್ಬ ವ್ಯಕ್ತಿಯು ಹಿಂಬದಿಯಲ್ಲಿ ಒಬ್ಬ ಸಹಸವಾರನನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗು ಅಜಾಗರೂಕತೆಯಿಂದ ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲಿನಲ್ಲಿದ್ದ ಸವಾರ ರಂಜಿತ್ ಗೆ ತೀವ್ರ ಸ್ವರೂಪದ ರಕ್ತಗಾಯ ಹಾಗೂ ಸಹಸವಾರ ಸನ್ನಿತ್ ನಾಯ್ಕ್ ರವರಿಗೆ ಸಾದಾ ಸ್ವರೂಪದ ರಕ್ತಗಾಯ ಉಂಟಾಗಿರುತ್ತದೆ. ಅಫಘಾತದಿಂದ ಕಾರು ಹಾಗೂ ಮೋಟಾರು ಸೈಕಲ್ ಜಖಂ ಆಗಿರುತ್ತದೆ.  ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 158/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಶಂಕರ  ಆಚಾರ್ಯ (55), ತಂದೆ: ಲಕ್ಷಣ್  ಆಚಾರ್ಯ, ವಾಸ: ವಿನಾಯಕ ಸುಣ್ಣಾರಿ ಹುಣ್ಸಮಕ್ಕಿ ಅಂಚೆ ಹೊಂಬಾಡಿ ಮುಂಡಾಡಿ ಗ್ರಾಮ ಕುಂದಾಪುರ  ತಾಲೂಕು ಇವರ ಬಾವ ಕೇಶವ ಆಚಾರ್ಯ (59) ಇವರು  ಕೆಲಸ ಇಲ್ಲದೆ ಮನೆಯಲ್ಲಿ ಇದ್ದು ವಿಪರೀತ ಶರಾಬು ಕುಡಿಯುವ ಚಟ ಹೊಂದಿರುತ್ತಾರೆ  ಹಾಗೂ  ಉಬ್ಬಸ  ಕಾಯಿಲೆಯಿಂದ ಬಳಲುತ್ತಿದ್ದವರು, ಈ  ವಿಷಯದಲ್ಲಿ   ಜೀವನದಲ್ಲಿ   ಜುಗುಪ್ಸೆಗೊಂಡು  ದಿನಾಂಕ   24/11/2021  ರಂದು   20:00  ಗಂಟೆಗೆ   ಅವರ  ವಾಸದ ಮನೆಯಾದ  ಕುಂದಾಪುರ    ತಾಲೂಕಿನ ಅಂಪಾರು ಗ್ರಾಮದ ಬಲಾಡಿ ಎಂಬಲ್ಲಿ ಶರಾಬಿಗೆ ಯಾವುದೋ ವಿಷವನ್ನು ಮಿಶ್ರಣ ಮಾಡಿ ಕುಡಿದು ಅಸ್ವಸ್ಥಗೊಂಡವರನ್ನು  ಚಿಕಿತ್ಸೆಯ  ಬಗ್ಗೆ ಕುಂದಾಪುರ  ಸರಕಾರಿ  ಆಸ್ಪತ್ರೆಗೆ ದಾಖಲು ಮಾಡಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 02/12/2021 ರಂದು ಬೆಳಗ್ಗಿನ ಜಾವ 5:45  ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 48/2021 ಕಲಂ: 174   ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
     

ಇತ್ತೀಚಿನ ನವೀಕರಣ​ : 03-12-2021 09:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080