ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಕಾರ್ಕಳ ತಾಲೂಕು ಸೂಡ ಗ್ರಾಮದ ಸೂಡ ಎಂಬಲ್ಲಿ ಸುರೇಶ್ ಶೆಟ್ಟಿ ಎಂಬುವವರ ಮಾಲಕತ್ವದ ಪ್ರಸ್ತುತ ಕೇರಳ ವಾಸಿ ಬಾಸಿತ್ ಎಂಬುವವರು ಲಿಸ್ ಗೆ ಪಡೆದುಕೊಂಡಿರುವ   ಓಂ ಕ್ರಶರ್ ನಲ್ಲಿ ಟಿಪ್ಪರ್ ನಂಬ್ರ KL-57-R-6815 ನೇ ದರಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿರುವ ಆಸೀಫ್ ಎಂದಿನಂತೆ  ದಿನಾಂಕ 02/08/2022 ರಂದು ಸುರೇಶ್ ಶೆಟ್ಟಿಯವರ ಮಾಲಕತ್ವದ ಕಲ್ಲು ಕೋರೆಯಿಂದ ಸೈಜು ಕಲ್ಲುಗಳನ್ನು ಟಿಪ್ಪರ್ ನಲ್ಲಿ ತಂದು ಓಂ ಕ್ರಶರ್ ನಲ್ಲಿ ಮಧ್ಯಾಹ್ನ 2:30 ಗಂಟೆಗೆ ಕ್ರಶರ್ ಬಳಿ ಇರುವ ಎತ್ತರದ ಜಾಗದಿಂದ ಅನ್ ಲೋಡ್ ಮಾಡುವ ಸಮಯ ನಿರ್ಲಕ್ಷತನದಿಂದ ನಿಗದಿತ ಗುರುತನ್ನು ದಾಟಿ ಅನ್ ಲೋಡ್ ಮಾಡಿದ್ದರಿಂದ ಓಮ್ಮೇಲೇ ಟಿಪ್ಪರ್ 40 ಅಡಿ ಕೆಳಗೆ ಮಗುಚಿ ಬಿದ್ದು, ಟಿಪ್ಪರ್ ಒಳಗೆ ಸಿಕ್ಕಿ ಹಾಕಿಕೊಂಡು  ಗಾಯಗೊಂಡವನನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಕೆಎಂಸಿ ಆಸ್ಪತ್ರೆಯ ವೈದ್ಯರು ಆಸೀಫ್ ನನ್ನು ಪರೀಕ್ಷಿಸಿ ಅದಗಾಲೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 101/2022 ಕಲಂ: 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ನಾಗರಾಜ  ಮಧು ಕಾಂಬ್ಳೆ (29), ತಂದೆ: ಮಧು  ಕಾಂಬ್ಳೆ,  ವಾಸ: ನಿರ್ಮಲ . ನಗರ ದಾಂಡೆಲಿ,  ಉ.ಕ  ಜಿಲ್ಲೆ ಇವರ  ಸಹೋದರ   ವಿಜಯ  ಕಾಂಬ್ಳೆ (33) ರವರು ವಿಪರೀತ  ಶರಾಬು ಕುಡಿಯುವ  ಚಟ ಹೊಂದಿದ್ದು,   ಸ್ವಂತ  ಊರಾದ  ಉತ್ತರ  ಕನ್ನಡ ಜಿಲ್ಲೆಯ   ದಾಂಡೇಲಿ  ನಿರ್ಮಲ  ನಗರ   ಎಂಬಲ್ಲಿ  ಸರಿಯಾಗಿ ಕೆಲಸ  ಮಾಡದೇ   ಬೇರೆ  ಬೇರೆ ಊರಿನಲ್ಲಿ  ಕೆಲಸ  ಮಾಡಿಕೊಂಡು  ಅಪರೂಪಕ್ಕೊಮೆ ಊರಿಗೆ ಹೋಗಿ  ಬರುತ್ತಾ ಇದ್ದು, ಆತನಿಗೆ ಇರುವ  ವಿಪರೀತ  ಶರಾಬು ಕುಡಿಯುವ  ಚಟದಿಂದ  ಜೀವನದಲ್ಲಿ   ಜಿಗುಪ್ಸೆಗೊಂಡ   ದಿನಾಂಕ  01/08/2022  ರಂದು  12:30  ಗಂಟೆಯ  ಮೊದಲು   ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ  ಸಿದ್ದಾಪುರ  ಹಿಂದೂ  ರುದ್ರ ಭೂಮಿಯಲ್ಲಿ  ಇರುವ  ಕಟ್ಟಡದಲ್ಲಿ   ನೈಲಾನ್ ಹಗ್ದದಿಂದ ಕುತ್ತಿಗೆಗೆ  ನೇಣು ಬಗಿದು ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 23/2022  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ವಾಸು ಶೆಟ್ಟಿ (45), ತಂದೆ: ಸಂಜೀವ ಶೆಟ್ಟಿ, ವಾಸ: ಬನಶಂಕರಿ ನಿಲಯ, ಅಡ್ಕ, ಕೊಂಕಣಾರ ಬೆಟ್ಟು ವರಂಗ ಗ್ರಾಮ, ಹೆಬ್ರಿ ತಾಲೂಕು ಇವರ ಬಾವ ಹರೀಶ್ ಶೆಟ್ಟಿ (51) ರವರು ವರಂಗ ಗ್ರಾಮದ ಹಿತ್ಲುಕೊಟ್ಟಿಗೆ ಎಂಬಲ್ಲಿ ವಾಸವಾಗಿದ್ದು. ಅವರು ಒಂದು ವಾರದ ಹಿಂದೆ ಪಿರ್ಯಾದಿದಾರರ ಮನೆಯಾದ ವರಂಗ ಗ್ರಾಮದ ಅಡ್ಕ ಎಂಬಲ್ಲಿಗೆ ಬಂದಿದ್ದು. ದಿನಾಂಕ 02/08/2022 ರಂದು ಹರೀಶ್ ಶೆಟ್ಟಿ ರವರು ವರಂಗ ಗ್ರಾಮದ ಅಡ್ಕ ಎಂಬಲ್ಲಿ ಮನೆಯ ಹೊರಗೆ ವರಾಂಡದಲ್ಲಿ ಮದ್ಯಾಹ್ನ 3:00 ಗಂಟೆಗೆ ಖುರ್ಚಿ ಮೇಲೆ ಕುಳಿತು ಕೊಂಡವರು ಅಲ್ಲಿಯೇ ಕುಸಿದು ಖುರ್ಚಿ ಸಮೇತ ಕೆಳಗೆ ಬಿದ್ದಿದ್ದು. ಅವರು ಮಾತನಾಡುತ್ತಿರದ ಕಾರಣ ಅವರನ್ನು ಚಿಕಿತ್ಸೆಯ ಬಗ್ಗೆ ಸಂಜೆ 4:30 ಗಂಟೆಗೆ ಹೆಬ್ರಿ ಸರಕಾರಿ ಅಸ್ಪತ್ರೆಗೆ ಕರೆ ತಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಅವರು ದಾರಿ ಮದ್ಯೆ ಮೃತ ಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 23/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

     

ಇತ್ತೀಚಿನ ನವೀಕರಣ​ : 03-08-2022 10:08 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080