ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ:

  • ಕಾರ್ಕಳ: ಪಿರ್ಯಾದಿ ಸೋಮಶೇಖರ , ಪ್ರಾಯ: 56 ವರ್ಷ, ತಂದೆ: ಪುಟ್ಟಸ್ವಾಮಿ, ವಾಸ:ಆದರ್ಶ ಆಸ್ಪತ್ರೆ ಬಳಿ ಕುಂದಾಪುರ ಇವರು ದಿನಾಂಕ: 2.8.2022 ರಂದು KA 20 C 4145 ನೇ ನೋಂದಣಿ ಸಂಖ್ಯೆಯ ಟಿಪ್ಪರ್ ಲಾರಿಯನ್ನು ಕಾರ್ಕಳದ ನಕ್ರೆ ಕಡೆಯಿಂದ ರಂಗನಪಲ್ಕೆ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಾ ಸಮಯ ಸುಮಾರು 12:45 ಗಂಟೆಗೆ ನಕ್ರೆ ಪಡ್ಯ ಎಂಬಲ್ಲಿಗೆ ತಲುಪುವಾಗ ಮೋಟಾರ್‌ಸೈಕಲ್‌ನಂಬ್ರ KA19EP2150 ನೇದನ್ನು ಸವಾರ  ಸುಹೈಲ್‌ ಮೊಯಿದಿನ್‌ ಎಂಬಾತನು ಸಾಜಿದಾ ಬಾನು ಎಂಬುವರನ್ನು ಸಹ ಸವಾರನಾಗಿ ಕುಳಿತುಕೊಳ್ಳಿಸಿ ನಕ್ರೆ ಕಡೆಯಿಂದ ರಂಗನಪಲ್ಕೆ ಕಡೆಗೆ ಅತೀ ವೇಗವಾಗಿ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಟಿಪ್ಪರ್‌ನ್ನು ಓವರ್‌ಟೇಕ್‌ಮಾಡಿಕೊಂಡು ಮುಂದೆ ಹೋಗುವ ರಭಸದಲ್ಲಿ ಬಲಬದಿಯ ಮಣ್ಣು ರಸ್ತೆಗೆ ಸವಾರಿ ಮಾಡಿಕೊಂಡು ಹೋಗಿದ್ದು ಮೋಟಾರ್‌ ಸೈಕಲ್‌ಸವಾರನ ನಿಯಂತ್ರಣ ತಪ್ಪಿ ಸ್ಕೀಡ್‌ಆಗಿ ಸವಾರ ಸುಹೈಲ್‌ಮೊಯಿದಿನ್‌ನು ಬಲ ಬದಿಯ ಮಣ್ಣು ರಸ್ತೆಗೆ ಬಿದ್ದಿದ್ದು, ಸಹ ಸವಾರಳಾದ ಸಾಜಿದಾ ಬಾನು ಇವರು ಟಿಪ್ಪರ್‌ನ ಮುಂಭಾಗ ಡಾಮಾರು ರಸ್ತೆಗೆ ಬಿದ್ದಾಗ ಆಕೆಯ ಎಡ ಕೈ ಟಿಪ್ಪರ್‌ನ ಮುಂಭಾಗದ ಚಕ್ರಕ್ಕೆ ಸಿಕ್ಕಿ ಹಾಕಿಕೊಂಡು  ಜಖಂಗೊಂಡಿದ್ದು, ಗಾಯಗೊಂಡ ಸಾಜಿದಾ ಬಾನು ಇವರು ಚಿಕಿತ್ಸೆಯ ಬಗ್ಗೆ ಮಂಗಳೂರಿನ ಹೈಲ್ಯಾಂಡ್‌ಆಸ್ಪತ್ರೆಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣಾ  ಅಪರಾಧ ಕ್ರಮಾಂಕ  104/2022 ಕಲಂ 279,338 ಐಪಿಸಿ   ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಫಿರ್ಯಾದಿ ನಟರಾಜ್ ದೇವಾಡಿಗ ಪ್ರಾಯ: 31 ವರ್ಷ, ತಂದೆ: ನಾರಾಯಣ ದೇವಾಡಿಗ, ವಾಸ: ತೆಂಕಿನ ಮನೆ, ಹಡವು ಅಂಚೆ ಮತ್ತು ಗ್ರಾಮ, ಬೈಂದೂರು ಇವರ ತಂದೆಯಾದ ನಾರಾಯಣ ದೇವಾಡಿಗ (55 ವರ್ಷ) ರವರು  ದಿನಾಂಕ: 01-08-2022 ರಂದು ಸಂಜೆ ಮೀನು ಹಿಡಿಯುವ ಬಗ್ಗೆ ಬೈಂದೂರು ತಾಲೂಕು ಹಡವು ಗ್ರಾಮದ ಅತ್ತಿಕೋಣೆ ಸೌಪರ್ಣಿಕ ಹೊಳೆಯ ತೀರದಲ್ಲಿ ಬಲೆ ಹಾಕುತ್ತಿದ್ದಾಗ  ಸಂಜೆ ಸಮಯ ಸುಮಾರು 6:15 ಗಂಟೆಗೆ ನದಿಯ ದಡದಿಂದ ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿಗೆ ಬಿದ್ದಿದ್ದು ನೀರು ರಭಸವಾಗಿ ಹರಿಯುತ್ತಿದ್ದುದರಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕಾಣೆಯಾಗಿರುತ್ತಾರೆ.  ಈ ದಿನ ದಿನಾಂಕ:03.08.2022 ರಂದು 08:30 ಗಂಟೆ ಸುಮಾರಿಗೆ ಕುಂದಾಪುರ ತಾಲೂಕು, ಸೇನಾಪುರ ಗ್ರಾಮದ ಬಂಟ್ವಾಡಿ ಸಮೀಪದ ಸೌಪರ್ಣಿಕ ನದಿಯಲ್ಲಿ ಸದ್ರಿಯವರ ಮೃತದೇಹವು ಪತ್ತೆಯಾಗಿರುತ್ತದೆ. ನಾರಾಯಣ ದೇವಾಡಿಗ ರವರು ಮೀನು ಹಿಡಿಯಲು ಹೊಳೆಯ ದಡದಲ್ಲಿ ಬಲೆ ಹಾಕುತ್ತಿದ್ದಾಗ  ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ಠಾಣೆ: ಯು.ಡಿ.ಆರ್ 18/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 03-08-2022 06:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080