Feedback / Suggestions

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸಂತೋಷ್.ಕುಂದರ್ (22), ತಂದೆ: ದೇವುದಾಸ್ ಕುಂದರ್, ವಾಸ: ಮಲ್ಪೆ ಬಾಪು ತೋಟ ಮಲ್ಪೆ ಉಡುಪಿ ಜಿಲ್ಲೆ ಇವರ ಚಿಕ್ಕಪ್ಪ ದಾಸ ಕುಂದರ್ ರವರು ದಿನಾಂಕ 30/07/2021 ರಂದು ಉಡುಪಿಯಿಂದ ಮಲ್ಪೆಗೆ ತನ್ನ ಮೋಟಾರ್ ಸೈಕಲ್ KA-20-X-6602 ನೇದನ್ನು ಸವಾರಿ ಮಾಡಿಕೊಂಡು ಸ್ವಾಧೀಷ್ಟ ಹೋಟೇಲ್ ಮುಂಭಾಗ ತಲುಪುವಾಗ ರಾತ್ರಿ 8:00 ಗಂಟೆಗೆ ಓರ್ವ ರಿಕ್ಷಾ ಚಾಲಕ ಕರಾವಳಿ ಕಡೆಯಿಂದ ಮಲ್ಪೆ ಕಡೆಗೆ ಯು ಟರ್ನ್ ಮಾಡಿ ಕರಾವಳಿ ಜಂಕ್ಷನ್ ಕಡೆಗೆ ರಾಷ್ಟ್ರೀಯ ಹೆದ್ದಾರಿ 169(ಎ)ರಲ್ಲಿ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ದಾಸ ಕುಂದರ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಮತ್ತು ರಿಕ್ಷಾ ಚಾಲಕ ಅಪಘಾತಪಡಿಸಿದ ನಂತರ ತನ್ನ ರಿಕ್ಷಾವನ್ನು ಸ್ಥಳದಲ್ಲಿ ನಿಲ್ಲಿಸದೇ ರಿಕ್ಷಾ ಸಮೇತ ಪರಾರಿಯಾಗಿರುತ್ತಾನೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2021 ಕಲಂ: 279, 338 ಐಪಿಸಿ ಮತ್ತು 134(ಎ)(ಬಿ) & 187 ಐ.ಎಮ್.ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಮಲ್ಪೆ: ಪಿರ್ಯಾದಿದಾರರಾದ ಕುಶಾಲಪ್ಪ(24), ತಂದೆ:ಉದ್ದಪ್ಪಂಡ ಜಗತ್, ವಾಸ: ಹೊಸೂರು, ಅಮ್ಮತ್ತಿ ಅಂಚೆ ,ವಿರಾಜಪೇಟೆ  ಕೊಡಗು ಇವರ ತಂಗಿ ದೇಚಮ್ಮ ಯು ಜೆ (20) ರವರು ತನ್ನ  ಸ್ನೇಹಿತರಾದ ನಿಖಿಲ್ ಗೌಡ, ಶೈನಿ ಉತ್ತಪ್ಪ  ಮತ್ತು ನವ್ಯ ಮಂದಣ್ಣ ರವರೊಂದಿಗೆ ಪ್ರವಾಸದ  ಬಗ್ಗೆ   ದಿನಾಂಕ 30/07/2021 ರಂದು ಕೊಡಗಿನಿಂದ ಖಾಸಗಿ ವಾಹನದಲ್ಲಿ ಹೊರಟು  ಮಂಗಳೂರಿಗೆ ಬಂದು  ನಂತರ 31/07/2021 ರಂದು ಉಡುಪಿಯ  ಮಲ್ಪೆ ಗೆ ಬಂದು ರೆಸಾರ್ಟ್ ನಲ್ಲಿ ತಂಗಿದ್ದು, ದಿನ ದಿನಾಂಕ 01/08/2021 ರಂದು ಮಲ್ಪೆ ಬೀಚ್ ನಲ್ಲಿ  ಸಮುದ್ರ ದ ನೀರಿನಲ್ಲಿ ಆಟ ಆಡುತ್ತಿರುವಾಗ  ನೀರಿನ ತೆರೆಯ ರಭಸಕ್ಕೆ  ಸಿಲುಕಿ ನೀರಿನಲ್ಲಿ ನಾಲ್ಕು ಜನರು ಕೊಚ್ಚಿಕೊಂಡು ಹೋಗಿದ್ದು, ತಮಿಳುನಾಡು ದೋಣಿಯವರು    ನವ್ಯ ಮಂದಣ್ಣ, ನಿಖಿಲ್ ಗೌಡ, ಶೈನಿ ಉತ್ತಪ್ಪ ರವ ರನ್ನು ರಕ್ಷಿಸಿದ್ದು ಆ ಪೈಕಿ ಪಿರ್ಯಾದಿದಾರರ ತಂಗಿ  ದೇಚಮ್ಮ ಯು ಜೆ ರವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕಾಣೆಯಾಗಿರುತ್ತಾರೆ .  ದಿನಾಂಕ 02/08/2021 ರಂದು ಬೆಳಿಗ್ಗೆ  07:30 ಗಂಟೆಗೆ   ಮಲ್ಪೆ  ಸೀವಾಕ್  ವೇ ನಲ್ಲಿ ಮೃತ ದೇಹ ತೇಲುತ್ತಿರುವುದಾಗಿ  ಮಾಹಿತಿ ಬಂದಂತೆ ಹೋಗಿ  ನೋಡಲಾಗಿ  ಪಿರ್ಯಾದಿದಾರರ ತಂಗಿ ದೇಚಮ್ಮ ಯು ಜೆ ರವರ ಮೃತ ದೇಹವಾಗಿರುತ್ತದೆ .  ಪಿರ್ಯಾದಿದಾರರ ತಂಗಿ  ಪ್ರವಾಸದ ಬಗ್ಗೆ  ಮಲ್ಪೆ ಬೀಚ್ ಗೆ ಬಂದು ಮಲ್ಪೆ ಬೀಚ್ ನಲ್ಲಿ ಸಮುದ್ರದ ತೆರೆಗಳ ಅಬ್ಬರ ಕ್ಕೆ ಸಿಲುಕಿ ನೀರಿನಲ್ಲಿ  ಕೊಚ್ಚಿಕೊಂಡು ಹೋಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 36/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 02/08/2021 ರಂದು 14:30 ಗಂಟೆಯಿಂದ 16:45 ಗಂಟೆಯ ಮಧ್ಯೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಪರಪ್ಪಾಡಿ ಎಂಬಲ್ಲಿರುವ ಅರ್ಬಿ ಫಾಲ್ಸ್ ನಲ್ಲಿ, ನಿಟ್ಟೆ ವಿದ್ಯಾ ಸಂಸ್ಥೆಯಲ್ಲಿ ಪ್ರಥಮ ವರ್ಷದ ಬಯೋ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವರ್ಷಿತಾ (20) ಎಂಬುವವರು ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ  ಮಾಡುತ್ತಿರುವ ಸ್ನೇಹಿತರಾದ ಶಶಾಂಕ್ ಹಾಗೂ ರುದ್ರ ಎಂಬುವವರೊಂದಿಗೆ ಸ್ನಾನ ಮಾಡುತ್ತಿರುವಾಗ ಅಕಸ್ಮಿಕವಾಗಿ ಕಾಲು ಜಾರಿ ಫಾಲ್ಸ್ ನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 25/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಉಜ್ವಲ ಕಿರಣ್‌(46), ಗಂಡ: ಕೆ. ನಾಗರಾಜ್‌ ಪೈ, ವಾಸ: ಪ್ರೇಮ್‌ ನಿವಾಸ್‌, ನಂಬ್ರ: 102ಬಿ, ಸಾಯಿರಾಧ ರೆಸಿಡೆನ್ಸಿ, ಹೋಟೇಲ್‌ ಕಿದಿಯೂರು ಹಿಂಭಾಗ, ಶಿರಿಬೀಡು, ಉಡುಪಿ ತಾಲೂಕು ಉಡುಪಿ ತಾಲೂಕು ಇವರು ಮೋಂಟ್ರೋ ಸೈಕಲ್‌ನ್ನು ಎಂದಿನಂತೆ ಸಾಯಿ ರಾಧಾ ರೆಸಿಡೆನ್ಸಿಯ ಪಾರ್ಕಿಂಗ್‌ಸ್ಥಳದಲ್ಲಿ ನಿಲ್ಲಿಸಿದ್ದು, ಸೈಕಲ್‌ನ್ನು ದಿನಾಂಕ 01/08/2021 ರಂದು 17:00 ಗಂಟೆಯಿಂದ ದಿನಾಂಕ 02/08/2021 ರಂದು ಬೆಳಿಗ್ಗೆ 10:00 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೈಕಲ್‌ನ ಮೌಲ್ಯ ರೂಪಾಯಿ 22,000/- ಆಗಿರುತ್ತದೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 106/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

Last Updated: 03-08-2021 09:46 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080