ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕುಂದಾಪುರ: ದಿನಾಂಕ 03/08/2021 ರಂದು ರಂದು ಮಧ್ಯಾಹ್ನ ಸುಮಾರು 12:00 ಗಂಟೆಗೆ, ಕುಂದಾಪುರ  ತಾಲೂಕಿನ ಕಸಬಾ ಗ್ರಾಮದ ಪಾರಿಜಾತ ಸರ್ಕಲ್‌ ಬಳಿಯ, ವಿನಯ ಆಸ್ಪತ್ರೆಯ ಹತ್ತಿರ, ಪುರಸಭಾ ಕಾಂಕ್ರೀಟ್‌  ರಸ್ತೆಯಲ್ಲಿ, ಪಿರ್ಯಾದಿದಾರರಾದ ಶ್ರೀಮತಿ ರೋಹಿಣಿ  (59) ಗಂಡ: ವಾಸು ವಾಸ: “ ಬ್ರಹ್ಮಯಕ್ಷಿ ಕೃಪಾ” ಅಬ್ಬಿ, ವಂಡ್ಸೆ ಗ್ರಾಮ, ಕುಂದಾಪುರ ಇವರು KA-20-EH-1485 Honda Deoನೇ ಸ್ಕೂಟರ್‌‌ನಲ್ಲಿ ಅವರ  ಮಗ ಮನೋಹರ್‌ರವರ ಜೋತೆಯಲ್ಲಿ ಸಹ ಸವಾರರಾಗಿ ಕುಳಿತುಕೊಂಡು ಕುಂದಾಪುರ ಹೊಸ ಬಸ್‌ನಿಲ್ದಾಣ  ಕಡೆಯಿಂದ ಶಾಸ್ತ್ರಿಸರ್ಕಲ್‌‌‌(ವಂಡ್ಸೆ) ಕಡೆಗೆ ಹೋಗುತ್ತಿರುವಾಗ, ಆಪಾದಿತ ಸುಬ್ರಹ್ಮಣ್ಯ ಎಂಬವರು KA-20-EC-7875ನೇ ಬೈಕನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ವಿನಯ ಆಸ್ಪತ್ರೆ ಕಡೆಯಿಂದ ಪುರಸಭೆ ರಸ್ತೆಗೆ ಅಡ್ಡವಾಗಿ ಸವಾರಿ ಮಾಡಿ ತಿರುಗಿಸಿ Honda Deoನೇ ಸ್ಕೂಟರ್‌‌ಡಿಕ್ಕಿ ಹೊಡೆದ ಪರಿಣಾಮ ಶ್ರೀಮತಿ ರೋಹಿಣಿ  ರವರ ಎಡಕೈಯ ಮೊಣಗಂಟಿಗೆ ಮೂಳೆ ಮುರಿತದ ಗಾಯ ಹಾಗೂ ಎಡಕಾಲಿಗೆ ಒಳನೋವಾದ ಗಾಯವಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಸಲ್ಮಾನ್ ಖಾನ್ (29) ತಂದೆ: ಹೈದರ್ ಆಲಿ ವಾಸ: ಜಿಲ್-81 7ನೇ ಬ್ಲಾಕ್, ಕೃಷ್ಣಾಪುರ, ಹಿಲ್‌ಸೈಡ್ ಸುರತ್ಕಲ್ ಮಂಗಳೂರು ಇವರ ತನ್ನ ಸ್ನೇಹಿತರೊಂದಿಗೆ ಎರಡು ಕಾರುಗಳಲ್ಲಿ ದಾಂಡೇಲಿಗೆ ಪ್ರವಾಸದ ಬಗ್ಗೆ ಹೋಗಿ ವಾಪಾಸ್ಸು ದಿನಾಂಕ 01/08/2021 ರಂದು ರಾತ್ರಿ 11:50 ಗಂಟೆಗೆ ಉಮ್ಮರ್ ಫಾರೂಕ್, ಅಬೂಬಕರ್ ಸಿದ್ದಿಕ್, ಸುಹೇಲ್, ಫೈಸಲ್ ಎಂಬವರು KA-20-MG-3446 ನೇ ಕಾರಿನಲ್ಲಿ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಬರುತ್ತಿರುವಾಗ ಪುತ್ತೂರು ಗ್ರಾಮದ ಸಂತೆಕಟ್ಟೆ ಜಂಕ್ಷನ್ ಬಳಿ ಇರುವ ಪ್ರೈಡ್ ಕಟ್ಟಡದ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ KA-18-C-1670 ನೇ ಪಿಕ್‌ಅಪ್ ವಾಹನ ಚಾಲಕ ಅನಿಲ್ ಎಂಬಾತನು ತನ್ನ ವಾಹನವನ್ನು ವಿರುದ್ದ ದಿಕ್ಕಿನಿಂದ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು KA-20-MG-3446 ನೇ ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಕಾರಿನಲ್ಲಿದ್ದ ಉಮ್ಮರ್ ಫಾರೂಕ್ ರವರಿಗೆ ಎದೆಗೆ ಪೆಟ್ಟಾಗಿದ್ದು ಹಾಗೂ ಫೈಸಲ್ ರವರಿಗೆ ತಲೆಗೆ ಮತ್ತು ತುಟಿಯ ಒಳಗಡೆ ಗಾಯವಾಗಿರುತ್ತದೆ, ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಸೇರಿಸಿರುತ್ತಾರೆ. ಈ ಅಫಘಾತದಿಂದ ಕಾರಿನ ಮುಂಭಾಗ ಜಖುಂಗೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾಣೆ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ ಗೀತಾ (35) ಗಂಡ  ಸತೀಶ  ಪೂಜಾರಿ ವಾಸ, ಸುಶೀಲ ನಿಲಯ ಜನತಾ ಕಾಲೋನಿ ನೆಲ್ಲಿಕಟ್ಟೆ ಅಂಪಾರು ಗ್ರಾಮ ಕುಂದಾಪುರ ಇವರ ಗಂಡ ಸತೀಶ ಪೂಜಾರಿ (40)ಇವರು ದಿನಾಂಕ 02/08/2021 ರಂದು ಬೆಳಿಗ್ಗೆ 9:00 ಘಂಟೆಗೆ ಅವರು ಕೆಲಸ ಮಾಡಿಕೊಂಡಿದ್ದ ಕುಂದಾಪುರ  ತಾಲೂಕಿನ ಅಂಪಾರು ಗ್ರಾಮದ ಅಂಪಾರು ನಾಗಶ್ರೀ ಬಾರ್‌‌ನಿಂದ ವ್ಯಾಕ್ಸಿನೇಶನ್ ತೆಗೆದುಕೊಂಡು  ಬರುತ್ತೇನೆ ಎಂದು ಹೇಳಿ ಹೋದವರು ವಾಪಾಸು ಬಾರ್‌‌ಗೆ ಕೆಲಸಕ್ಕೆ ಹೋಗದೇ ಮನೆಗೆ ಸಹ ಬಾರದೇ   ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-08-2021 06:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080