ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಲತೀಫ್‌ (19), ತಂದೆ: ರಜಾಬ್‌, ವಾಸ: ಸರಕಾರಿಗುಡ್ಡೆ, 8ನೇ ಅಡ್ಡ ರಸ್ತೆ, ಮೂಡಬೆಟ್ಟು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 02/05/2021 ರಂದು ಕೆಲ್ವಿನ್‌(19), ಜಾಬೀರ್‌(18), ರಿಜ್ವಾನ್‌(18)‌, ಸಂಕೇತ್‌, ಆಸ್ಪಕ್‌ ರವರೊಂದಿಗೆ ಬಾವಿಯ ಕೆಲಸದ ಬಗ್ಗೆ ಕಟ್ಟಿಂಗೇರಿ  ವ್ಯಾಸರಾಯ ಹೆಬ್ಬಾರ್‌ರವರ ಮನೆಯ ಬಾವಿಯ ಕೆಲಸಕ್ಕೆಂದು ಬೆಳಿಗ್ಗೆ 8:30 ಗಂಟೆಗೆ ಹೋಗಿದ್ದು, ಕೆಲಸ ಮುಗಿಸಿ ವಾಪಾಸು ಶಂಕರಪುರಕ್ಕೆ ಹೋಗಲು ಬೆಳ್ಳೆ-ಪಾಂಬೂರು ಮಾರ್ಗವಾಗಿ ಬರುತ್ತಿರುವಾಗ 4:00 ಗಂಟೆಗೆ ಬೆಳ್ಳೆ ಗ್ರಾಮದ ಅಮಾಸೆಕರಿಯ ಪಾಪನಾಶಿನಿ ಹೊಳೆಯಲ್ಲಿ ಆರು ಜನ ನದಿಯ ದಡದಲ್ಲಿರುವ ಪಾದೆ ಕಲ್ಲಿನಲ್ಲಿ ಬಟ್ಟೆ ಒಗೆಯಲು ಬಂದಾಗ ಕೆಲ್ವಿನ್‌ ನಿಯಂತ್ರಣ ತಪ್ಪಿ ಪಾದೆ ಕಲ್ಲಿನಿಂದ ಜಾರಿ ನದಿ ನೀರಿಗೆ ಬಿದ್ದಾಗ ಜಾಬಿರ್‌ ಮತ್ತು ರಿಜ್ವಾನ್‌ರವರು ಕೆಲ್ವಿನ್‌ರವರನ್ನು ಹಿಡಿದುಕೊಂಡಾಗ ಅವರು ಕೂಡಾ ನದಿಯ ನೀರಿಗೆ ಬಿದ್ದಿರುತ್ತಾರೆ.  ಮೂರು ಜನರನ್ನು ರಕ್ಷಿಸಲು ಪಿರ್ಯಾದಿದಾರರು ನದಿಗೆ ಹಾರಿದ್ದು, ಆವಾಗಲೇ ಮೂರು ಜನ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13 /2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೊಲ್ಲೂರು: ಕೊವೀಡ್ – 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರಕಾರವು ಹೊರಡಿಸಿರುವ ಮಾರ್ಗಸೂಚಿ ಹಾಗೂ ಮಾನ್ಯ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ಇವರು ದಿನಾಂಕ 27/04/2021 ರಿಂದ 12/05/2021 ರ ವರೆಗೆ ಕೊವೀಡ್ ಕರ್ಪ್ಯೂ ವಿಧಿಸಿದ್ದು, ಕಪ್ಯೂ ಜ್ಯಾರಿಗೊಳಿಸುವ ಬಗ್ಗೆ ಹೊರಡಿಸಿದ ಆದೇಶದಂತೆ ದಿನಾಂಕ 02/05/2021 ರಂದು ನಾಸೀರ್ ಹುಸೈನ್, ಪೊಲೀಸ್‌ ಉಪನಿರೀಕ್ಷಕರು, ಕೊಲ್ಲೂರು ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಂದಾಫುರ ತಾಲೂಕು ಬೆಳ್ಳಾಲ ಗ್ರಾಮದ ಚಪ್ಪರ್ಕ ಎಂಬಲ್ಲಿ  ಮಹಾಕಾಳಿ ಕೋಳಿ ಮಾಂಸ ಮಾರಾಟದ ಅಂಗಡಿಯನ್ನು  ತೆರದು ಮಾರಾಟ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಕೊವೀಡ್ -19 ಕೊರೋನ ವೈರಸ್ ಸೊಂಕು  ಹರಡುತ್ತಿರುವ ಬಗ್ಗೆ ಸೊಂಕು ಹರಡುವುದ್ದನ್ನು ತಡೆಗಟ್ಟುವ ಕುರಿತು   ಸರಕಾರ ಹೊರಡಿಸಿರುವ ಮತ್ತು  ಜಿಲ್ಲಾಡಳಿತದ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ಸೋಂಕನ್ನು  ಹರಡುವ ಸಂಭವ ಇದೆ ಎಂದು ತಿಳಿದು ಕೂಡ ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿ ನಿಯಮಗಳನ್ನು  ಉಲ್ಲಂಘಿಸಿ ಅಪಾದಿತ ಭಾಸ್ಕರ್ ಶೆಟ್ಟಿ (65), ತಂದೆ: ದಿ. ಸೂರಪ್ಪ ಶೆಟ್ಟಿ,  ವಾಸ: ಚಪ್ಪರ್ಕ ಬೆಳ್ಳಾಲ ಗ್ರಾಮ ಕುಂದಾಪುರ ತಾಲೂಕು ಇವರು ಕೋಳಿ ಅಂಗಡಿಯನ್ನು ತೆರೆದು ಆಪರಾಧ ಎಸಗಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 14/2021  ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-05-2021 10:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080