Feedback / Suggestions

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಬೈಜು ಐಸಾಕ್ (46), ತಂದೆ: ಐಸಾಕ್, ವಾಸ: ಕಿಜಕೆಡತ್ ವೀಡು, ಕುನ್ನೇರಿ ಗ್ರಾಮ, ಮಕ್ಕಿಯಾಡ್ ಅಂಚೆ, ವಯನಾಡು ಜಿಲ್ಲೆ, ಕೇರಳ ರಾಜ್ಯ ಇವರು ಉಡುಪಿಯ ಹುಣ್ಸೆಮಕ್ಕಿ ವಾಸಿ ಸುದರ್ಶನ ಕೆ.ಸಿ. ಎಂಬವರ ಫ್ಲಾಂಟ್ಗೆ ಬಾಳೆ ಗಿಡಗಳನ್ನು ತನ್ನ ತಮ್ಮ ಶಿಜು ಐಸಾಕ್ ರವರ ಮುಖೇನ ಆರ್ಡರ್ ಮಾಡಿದ್ದು, ಅದರಂತೆ ಶಿಜು ಐಸಾಕ್ ತಮಿಳುನಾಡಿನಿಂದ ಬಾಳೆಗಿಡಗಳನ್ನು ಖರೀದಿ ಮಾಡಿ ಅದನ್ನು TN-40-T-2301 ನೇ ಅಶೋಕ್ ಲೈಲಾಂಡ್ ಲಾರಿಯಲ್ಲಿ ಲೋಡ್ ಮಾಡಿಕೊಂಡು ಅದರ ಚಾಲಕ ಪ್ರಭು ರವರೊಂದಿಗೆ ಉಡುಪಿಗೆಂದು ದಿನಾಂಕ 19/04/2022 ರಂದು ಸಂಜೆ ಸಮಯ ಹೋಗಿದ್ದು, ಅವರು ರಾತ್ರಿ ಸಮಯ ಹುಣ್ಸೆಮಕ್ಕಿ ತಲುಪಿದ್ದು, ಅಲ್ಲಿರುವ ಸುದರ್ಶನ ರವರ ಫ್ಲಾಂಟ್ನಲ್ಲಿ ಬಾಳೆಗಿಡಗಳನ್ನು ಇಳಿಸಲು ಪ್ರಾರಂಭಿಸಿರುತ್ತಾರೆ. ದಿನಾಂಕ 20/04/2022 ರಂದು ಮಧ್ಯರಾತ್ರಿ 01:00 ಗಂಟೆಗೆ ಲಾರಿಯಿಂದ ಬಾಳೆಗಿಡಗಳನ್ನು ಇಳಿಸುತ್ತಿರುವಾಗ ಲಾರಿಯು ಅಲ್ಲೇ ಮಣ್ಣಿನಲ್ಲಿ ಸಿಕ್ಕಿಹಾಕಿಕೊಂಡಿದ್ದು, ಆಗ ಶಿಜು ಐಸಾಕ್ ನು ಲಾರಿಗೆ ಕೆಳಗೆ ಏನಾಯಿತು ಎಂದು ನೋಡುವಾಗ ಅದರ ಚಾಲಕ ಪ್ರಭು ಅಜಾಗರೂಕತೆಯಿಂದ ಓಮ್ಮೆಲೆ ಲಾರಿಯನ್ನು ಮುಂದೆ ಚಲಾಯಿಸಿದಾಗ ಲಾರಿಯ ಮುಂದಿನ ಎಡಬದಿಯ ಟಯರ್ ಶಿಜು ಐಸಾಕ್ ನ ಎಡಕಾಲ ಪಾದದ ಮೇಲೆ ಹರಿದಿರುತ್ತದೆ. ಈ ಅಪಘಾತದಿಂದ ಶಿಜು ಐಸಾಕ್ ನ ಕಾಲಿನ ಪಾದದ ಮೂಳೆ ಜಖಂಗೊಂಡು ರಕ್ತಗಾಯವಾಗಿರುತ್ತದೆ. ಕೂಡಲೇ ಲಾರಿ ಚಾಲಕ ಪ್ರಭು ಹಾಗೂ ಪ್ಲಾಂಟ್ ಮಾಲೀಕ ಸುದರ್ಶನ ರವರು ಶಿಜು ಐಸಾಕ್ ನನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಅಲ್ಲಿ ಆತನನ್ನು ಒಳರೋಗಿಯಾಗಿ ದಾಖಲು ಮಾಡಿದರೇ ಆರೈಕೆ ಮಾಡಲು ಯಾರೂ ಇಲ್ಲದ ಕಾರಣ ಆತನನ್ನು ಅಲ್ಲಿಂದ ಅದೇ ದಿನ ಬಿಡುಗಡೆಗೊಳಿಸಿ ಕ್ಯಾಲಿಕಟ್ನ The Kozhikode District Co-Operative Hospital ಗೆ ಕರೆತಂದಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ ಆತನ ಎಡಕಾಲಿನ ಪಾದದ ಮೂಳೆಯು ತೀವ್ರ ತರದ ಜಖಂ ಆಗಿರುತ್ತದೆ. ಪಿರ್ಯಾದಿದಾರರು  ತಮ್ಮನ ಆರೈಕೆಯಲ್ಲಿದ್ದುದರಿಂದ ಹಾಗೂ ಕೇರಳದ ವಾಸಿಗಳಾಗಿದ್ದರಿಂದ ಈವರೆಗೆ ಉಡುಪಿಗೆ ಬಂದು ದೂರು ನೀಡಲು ಅನಾನುಕೂಲವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 79/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಹರ್ಷಿತ್ (28), ತಂದೆ: ರಮೇಶ್ ಕೆ, ವಾಸ: #5-122, ಶ್ರೀ ಸುಮುಖ, ಭಾರತ್ ನಗರ, ಬಡಾ ಎರ್ಮಾಳು, ಪಡು ಅಂಚೆ, ಬಡಾ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ತಂದೆ ರಮೇಶ್ ಕೆ (62) ಎಂಬುವವರು ನಿವೃತ್ತ ಸೈನಿಕರಾಗಿದ್ದು, ದಿನಾಂಕ 01/06/2022 ರಂದು ಕಾಪು ತಾಲೂಕು ಬಡಾ ಗ್ರಾಮ ಭಾರತ್‌‌ನಗರದಲ್ಲಿರುವ ತಮ್ಮ ಮನೆಯ ಕಂಪೌಂಡ್ ಒಳಗೆ ತೆಂಗಿನ ಮರದಿಂದ ಬಿದ್ದ ಗರಿಗಳನ್ನು ಹೆಕ್ಕಲು ಹೋದಾಗ ಸಂಜೆ 18:00 ಗಂಟೆಗೆ ರಮೇಶ್ ಕೆ ರವರ ಬಲಕಾಲಿನ ಪಾದಕ್ಕೆ ಯಾವುದೋ ಹಾವು ಕಚ್ಚಿದ್ದು, ನಂತರ ಅವರನ್ನು ಚಿಕಿತ್ಸೆಯ ಬಗ್ಗೆ ಉಡುಪಿಯ ಟಿ.ಎಂ.ಎ. ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 21:20 ಗಂಟೆಗೆ ರಮೇಶ್ ಕೆ ರವರು ಮೃತಪಟ್ಟಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2022, ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ಕಿರಣ (31), ತಂದೆ:ನಾಗಪ್ಪ ಶೆಟ್ಟಿಗಾರ, ವಾಸ: ಸಂತೆಕಟ್ಟೆ ಓಣಿಕಲ್ಲು ನಾಲ್ಕೂರು ಗ್ರಾಮ ಬ್ರಹ್ಮಾವರ ತಾಲೂಕು ಇವರ ತಂದೆ ನಾಗಪ್ಪ ಶೆಟ್ಟಿಗಾರ್(65) ಇವರ ದಿನಾಂಕ 02/06/2022 ರಂದು ಮುಂಜಾನೆ 01:00 ಗಂಟೆಯಿಂದ ಬೆಳಿಗ್ಗೆ 06:00 ಗಂಟೆಯ ಮದ್ಯಾವಧಿಯಲ್ಲಿ ನಾಲ್ಕೂರು ಗ್ರಾಮದ ಸಂತೆಕಟ್ಟೆಯ ಓಣಿಕಲ್ಲು ಎಂಬಲ್ಲಿ ತನ್ನ ಮನೆಯ ಹೊರಗೆ ಇರುವ ಸೀಟೌಟ್ ನ ಮೇಲಿನ ಮರದ ಜಂತಿಗೆ ಸೀರೆಯ ಒಂದು ತುದಿಯನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ನೇಣು ಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 20/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  


Last Updated: 02-06-2022 05:59 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080