ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 30/09/2021ರಂದು ಬೆಳಿಗ್ಗೆ 11:45 ಗಂಟೆಗೆ ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಪೂಜಾ ಮಾರ್ಬಲ್ಸ್‌ ಬಳಿ NH 66 ರಸ್ತೆಯಲ್ಲಿ, ಪಿರ್ಯಾದಿದಾರರಾದ ಶ್ರೀಮತಿ ಫರ್ಹಾ ಝೇಹ್ಸ್‌‌‌ (25), ಗಂಡ: ಮುಜಕ್ಕೀರ್‌,‌ ವಾಸ: ಹೈಸ್ಕೂಲ್‌ ರಸ್ತೆ, ಕಿರಿ ಮಂಜೇಶ್ವರ, ನಾವುಂದ ಗ್ರಾಮ, ಬೈಂದೂರು ತಾಲೂಕು ಇವರು ತಂದೆ ಮೌಲಾನಾ ಮೊಹಮ್ಮದ್‌‌‌ ಝುಭೈರ್‌‌‌‌‌ರೊಂದಿಗೆ KA-20-EA-4801ನೇ ಬೈಕಿನಲ್ಲಿ ಸಹ ಸವಾರರಾಗಿ ಕುಳಿತುಕೊಂಡು ಕುಂದಾಪುರ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿರುವಾಗ, ಆಪಾದಿತ ಗಿರೀಶ್‌ ಗೌಡ KA-20-D-6267ನೇ ಶ್ರೀ ದುರ್ಗಾಂಬಾ ಬಸ್‌‌ನ್ನು ಅದೇ ದಿಕ್ಕಿನಲ್ಲಿ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬೈಕ್‌‌ನ್ನು ಓವರ್‌ಟೇಕ್‌ ‌ಮಾಡಿ ಮುಂದೆ ಹೋಗಿ ಯಾವುದೇ ಸಿಗ್ನಲ್‌‌ ‌‌ನೀಡದೇ ಒಮ್ಮೇಲೆ NH 66 ರಸ್ತೆಯಲ್ಲಿ ನಿಲ್ಲಿಸಿದ ಕಾರಣ ಪಿರ್ಯಾದಿದಾರರ ಬೈಕ್‌ ‌ಬಸ್ಸಿನ ಹಿಂಬದಿಗೆ ತಾಗಿ ಅಪಘಾತಕ್ಕೆ ಒಳಗಾಗಿ ಬೈಕ್‌ ಸವಾರ ಮೌಲಾನಾ ಮೊಹಮ್ಮದ್‌‌‌ ಝುಭೈರ್‌ ರವರ ‌‌‌‌ಮೂಗು, ದವಡೆ, ಹಲ್ಲಿನ ಭಾಗಗಳಿಗೆ ತೀವ್ರ ಗಾಯ ಹಾಗೂ ಪಿರ್ಯಾದಿದಾರರಿಗೆ ಕೈ ಕಾಲುಗಳಿಗೆ ಒಳ ನೋವಾಗಿದ್ದು, ಗಾಯಾಳುಗಳು ಕೊಟೇಶ್ವರ ಎನ್‌. ಆರ್‌ಆಚಾರ್ಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದು, ಗಂಭೀರ ಗಾಯಗೊಂಡ ಮೌಲಾನಾ ಮೊಹಮ್ಮದ್‌‌‌ ಝುಭೈರ್‌‌‌‌‌ರವರು ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2021 ಕಲಂ: 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಶಾಂತಮ್ಮ (53), ಗಂಡ: ದಿ. ಭೋಜ ನಾಯ್ಕ, ವಾಸ: ಮನೆ ನಂಬ್ರ: 18, ಹೊಳೆಗದ್ದೆ, ಕುಂಬ್ರಗೋಡು, ಬೇಗಾರು ಗ್ರಾಮ, ಶೃಂಗೇರಿ ತಾಲೂಕು, ಚಿಕ್ಕಮಗಳೂರು ಜಿಲ್ಲೆ ಇವರ ಹಿರಿಯ ಮಗ ಸಂತೋಷ ಹೆಚ್‌.ಬಿ(34) ರವರು ಉಡುಪಿಯಲ್ಲಿ ಕಾರ್ಮಿಕನಾಗಿದ್ದು, ಮದ್ಯ ವ್ಯಸನಿಯಾಗಿರುತ್ತಾರೆ. ಕಳೆದ ಏಳೆಂಟು ವರ್ಷಗಳಿಂದ ಮನೆಗೆ ಬಾರದೇ ಉಡುಪಿಯಲ್ಲಿ ಅಲೆಮಾರಿಯಂತೆ ಜೀವಿಸಿಕೊಂಡಿದ್ದವರು, ತನ್ನ ಮದ್ಯಸೇವನೆಯ ಚಟದಿಂದ ಜೀವನದಲ್ಲಿ ಬೇಸತ್ತು ದಿನಾಂಕ 30/09/2021 ರಂದು 15:00 ಗಂಟೆಗೆ ಉಡುಪಿ ಅಜ್ಜರಕಾಡುವಿನ ಹುತಾತ್ಮ ಸೈನಿಕರ ಸ್ಮಾರಕದ ಹಿಂಬದಿಯ ಮರದ ಗೆಲ್ಲಿಗೆ ಬಾತ್‌ ಟವಲಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 41/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ದಿನಾಂಕ 27/09/2021 ರಂದು ಸಂಜೆ 19:00 ಗಂಟೆಗೆ ಮಣಿಪಾಲ ಠಾಣಾ ಪೊಲೀಸ್ ಉಪನಿರೀಕ್ಷಕರಾದ ರಾಜಶೇಖರ್‌ ‌ವಂದಲಿ ರವರಿಗೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ,ಶಿವಳ್ಳಿ ಗ್ರಾಮದ,ವಿದ್ಯಾರತ್ ನಗರದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಅಬ್ದುಲ್ ರೌಫ್ (21), ತಂದೆ: ಹಮೀದ್, ವಿಳಾಸ: ದೊಡ್ಡಣಗುಡ್ಡೆ ಮಸೀದಿ ಬಳಿ, ಶಿವಳ್ಳಿ ಗ್ರಾಮ, ಉಡುಪಿ ಎಂಬಾತನು ಗಾಂಜಾ ಸೇವನೆ ಮಾಡಿದ ಬಗ್ಗೆ ಬಂದ ಅನುಮಾನದ ಮೇರೆಗೆ ಆತನನ್ನು ವಶಕ್ಕೆ ಪಡೆದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ  ವೈದ್ಯರ ಮುಂದೆ ಹಾಜರುಪಡಿಸಿದ್ದು, ದಿನಾಂಕ  01/10/2021 ರಂದು  ಮಣಿಪಾಲ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗದ ವೈದ್ಯರು ಅಬ್ದುಲ್ ರೌಫ್ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಢ ಪತ್ರ ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 125/2021 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-10-2021 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080