ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ:  ದಿನಾಂಕ 01//09/2022 ರಂದು ಬೆಳಿಗ್ಗೆ ಸುಮಾರು 9:10  ಗಂಟೆಗೆ,  ಕುಂದಾಪುರ  ತಾಲೂಕಿನ, ಹಟ್ಟಿಯಂಗಡಿ   ಗ್ರಾಮದ  ಸಬ್ಲಾಡಿಯ  ಸ. ಕಿ. ಪ್ರಾ. ಶಾಲೆಯ ಬಳಿ ರಸ್ತೆಯಲ್ಲಿ, ಆಪಾದಿತ ಕನ್ಹಯ್‌ಕುಮಾರ್‌  ಎಂಬವರು  KA20-ME-1278ನೇ ಕ್ರೇನ್‌‌‌ನ್ನು ಸಬ್ಲಾಡಿ  ಕಡೆಯಿಂದ ಹಟ್ಟಿಯಂಗಡಿ ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ   ಮಾಡಿಕೊಂಡು ಬಂದು,  ಅದೇ  ದಿಕ್ಕಿನಲ್ಲಿ  ಪಿರ್ಯಾದಿ ಶ್ರೀಮತಿ ಮಾಲತಿ ಆರ್‌ಆಚಾರ್‌ಪ್ರಾಯ  46 ವರ್ಷ ಗಂಡ : ರತ್ನಾಕರ ಆಚಾರ್ ವಾಸ: ಸಬ್ಲಾಡಿ ಸ. ಕಿ. ಪ್ರಾ. ಶಾಲೆಯ ಬಳಿ, ಹಟ್ಟಿಯಂಗಡಿ  ಎಂಬವರು ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ   ಡಿಕ್ಕಿ ಹೊಡೆದ ಪರಿಣಾಮ ಮಾಲತಿ ಆರ್‌ಆಚಾರ್‌ ರವರ  ಬಲಬಕಾಲಿನ ಹಿಮ್ಮಡಿ ಗಂಟಿಗೆ ಹಾಗೂ ಬಲಬದಿಯ ಸೊಂಟಕ್ಕೆ  ಒಳ ನೋವಾಗಿ  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ.ಈ  ಬಗ್ಗೆಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 95/2022  ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.   
     

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿ ಶ್ರೀಮತಿ ಅಮಿತಾ(35) ಗಂಡ: ಸಂದೇಶ್ ಕುಲಾಲ್, ವಾಸ: ಶಿವರುದ್ರ ನಿವಾಸ, ಬಡಪಾಲು ಕುಕ್ಕೆಹಳ್ಳಿ , ಗ್ರಾಮ , ಇವರ ತಂದೆ ಮಹಾಬಲ ಕುಲಾಲ್(75) ರವರು ಸುಮಾರು 1 ತಿಂಗಳಿನಿಂದ ಕೆಮ್ಮು ಕಫದ ಬಾಧೆಯಿಂದ ಬಳಲುತ್ತಿದ್ದು ಈ ಬಗ್ಗೆ ಕುಕ್ಕೆಹಳ್ಳಿ ಪ್ರಾಥಮಿಕ  ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಮಾಡಿಸಿದ್ದು ಬಳಿಕ ಉಡುಪಿ ಸರಕಾರಿ ಅಸ್ಪತ್ರಯಲ್ಲಿ ಹೆಚ್ಚಿನ ಚಿಕಿತ್ಸೆ ಮಾಡಿಸಿದ್ದು ವೈದ್ಯರು ಕ್ಷಯ ರೋಗದ ಲಕ್ಷಣಗಳಿರಬಹುದೆಂದು ತಿಳಿಸಿದ್ದು ಇದೇ ವಿಚಾರದಲ್ಲಿ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ: 01/09/2022 ರಂದು ಬೆಳಿಗ್ಗೆ  6:00 ಗಂಟೆಯಿಂದ 08:00 ಗಂಟೆಯ ಮದ್ಯಾವಧಿಯಲ್ಲಿ ಬಡಪಾಲು ಪ್ರವೀಣ್ ಹೆಗ್ಡೆಯವರ ಬಯಲು ಗದ್ದೆಯ ಬಳಿ ಇರುವ ಅವರಣ ಗೋಡೆ ಇಲ್ಲದ ಬಾವಿಗೆ ಹಾರಿ ಅತ್ಮ ಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ. ಯುಡಿಆರ್ ನಂಬ್ರ: 35/2022 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.   
     

ಇತ್ತೀಚಿನ ನವೀಕರಣ​ : 01-09-2022 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080