ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಉಡುಪಿ: ದಿನಾಂಕ 31/08/2021 ರಂದು ಅಂಬಾಗಿಲು ಕಡೆಯಿಂದ ಉಡುಪಿ ಕಡೆಗೆ KA-20-EU-5233 ನೇ ಮೋಟಾರು ಸೈಕಲ್ ಸವಾರ ಉದಯ ಕುಮಾರ್ ಶೆಟ್ಟಿ ಎಂವಬವರು ತನ್ನ ಮೋಟಾರು ಸೈಕಲನ್ನು ರಸ್ತೆಯ ಎಡಬದಿಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದು ಸಮಯ ಸುಮಾರು ಬೆಳಿಗ್ಗೆ 10:30 ಗಂಟೆಗೆ ಅಂಬಾಗಿಲು ಜಂಕ್ಷನ್ ಬಳಿ ಅರ್ಪಿತಾ ಟ್ರೇಡರ್ಸ್ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಲುಪುವಾಗ ರಸ್ತೆಯ ಬಲಬದಿಯಿಂದ ಸವಾರಿ ಮಾಡಿಕೊಂಡು ಅಂಬಾಗಿಲು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ KA-20-MA-2822 ನೇ ಕಾರು ಚಾಲಕ ಐವಾನ್ ಎಂಬಾತ ತನ್ನ ಕಾರನ್ನು ಯಾವುದೇ ಸೂಚನೆ ನೀಡದೇ ದುಡುಕುತನ ಮತ್ತು ನಿರ್ಲಕ್ಷತನದಿಂದ ಒಮ್ಮೆಲೆ ರಸ್ತೆಯ ಎಡಬದಿಗೆ ಚಲಾಯಿಸಿದ ಪರಿಣಾಮ ನೇರವಾಗಿ ಸವಾರಿ ಮಾಡಿಕೊಂಡು ಬರುತ್ತಿದ್ದ KA-20-EU-5233 ನೇ ಮೋಟಾರು ಸೈಕಲ್ ಗೆ ಡಿಕ್ಕಿಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಉದಯ ಕುಮಾರ್ ಶೆಟ್ಟಿ (37)  ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲ ಕೈ ಬಲ ಕಾಲಿಗೆ ತರಚಿದ ಗಾಯವಾಗಿದ್ದು, ಹೊಟ್ಟೆಗೆ ಗುದ್ದಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ರಮೇಶ್ ನಾಯ್ಕ (42), ತಂದೆ: ಬಾಬಣ್ಣ ನಾಯ್ಕ, ವಾಸ: ಕೆಂದೊಡಿ ಮುಂಡಾಡಿ, ಕಾಡೂರು ಗ್ರಾಮ, ಬ್ರಹ್ಮಾವರ ಇವರು ತನ್ನ KA-20-C-7341 ನೇ ಆಟೋ ರಿಕ್ಷಾದಲ್ಲಿ ವನಜ ಹಾಗೂ ಅವರ ಮಗಳು ಪ್ರಮೋದಾ ರವರನ್ನು ಬಾಡಿಗೆಯಲ್ಲಿ ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಕೊಕ್ಕರ್ಣೆಯಿಂದ ಮೈರ್‌ಕೋಮೆ ಕಡೆಗೆ ಚಲಾಯಿಸಿಕೊಂಡು ಹೊರಟು ಬೆಳಿಗ್ಗೆ 10:20 ಗಂಟೆ ಸುಮಾರಿಗೆ ಪೆಜಮಂಗೂರು ಗ್ರಾಮದ, ಕೊಕ್ಕರ್ಣೆ ಪ್ರಾಥಮಿಕ ಶಾಲೆ ಕ್ರಾಸ್ ರಸ್ತೆಯ ಬಳಿ ತಲುಪುವಾಗ ಅವರ ಮುಂಭಾಗದಲ್ಲಿ ಮೈರ್‌ಕೋಮೆ ಕಡೆಗೆ KA-20-EU-4093 ನೇ ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಹೊಗುತ್ತಿದ್ದ ಆರೋಪಿ ಚಂದ್ರ ನಾಯ್ಕ ರವರು ತನ್ನ ದ್ವಿಚಕ್ರ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿ ಕೊಕ್ಕರ್ಣೆ ಪ್ರಾಥಮಿಕ ಶಾಲೆ ಕಡೆಗೆ ಹೋಗಲು ಯಾವುದೇ ಇಂಡಿಕೇಟರ್ ಹಾಕದೇ ದ್ವಿಚಕ್ರ ವಾಹನವನ್ನು ತನ್ನ ಬಲ ಭಾಗಕ್ಕೆ ತಿರುಗಿಸಿದ ಪರಿಣಾಮ ಅದೇ ಸಮಯ ರಮೇಶ್ ನಾಯ್ಕ ರವರು ತನ್ನ ರಿಕ್ಷಾವನ್ನು ಅವರ ಬಲ ಭಾಗಕ್ಕೆ ಚಲಾಯಿಸಿ ಅಪಘಾತ ತಪ್ಪಿಸಲು ಪ್ರಯತ್ನಿಸಿದಾಗ ಆರೋಪಿಯ ದ್ವಿ ಚಕ್ರ ವಾಹನವು ರಿಕ್ಷಾದ ಮುಂದಿನ ಎಡಭಾಗಕ್ಕೆ ತಾಗಿದ್ದು, ಆಗ ರಿಕ್ಷಾ ರಸ್ತೆಯ ಬಲ ಭಾಗದ ಚರಂಡಿಗೆ ಹೋಗಿ ಪಲ್ಟಿಯಾಗಿ ಬಿದ್ದಿರುತ್ತದೆ. ಪರಿಣಾಮ ರಿಕ್ಷಾದ ಒಳಗಿದ್ದ ರಮೇಶ್ ನಾಯ್ಕ ರವರ ಬಲ ಸೊಂಟದ ಬಳಿ ಒಳ ಜಖಂ ಉಂಟಾಗಿದ್ದು ಹಾಗೂ ಪ್ರಯಾಣಿಕರಾದ ಪ್ರಮೋದಾ ರವರ ಕೆನ್ನೆಗೆ, ಮಂಡಿಗೆ ಪೆಟ್ಟಾಗಿದ್ದು, ಅವರ ತಾಯಿ ವನಜ ರವರ ಎಡಕಾಲಿಗೆ ಬೆನ್ನಿಗೆ ಒಳ ಜಖಂ ಉಂಟಾಗಿರುತ್ತದೆ. ಅಲ್ಲದೇ ಈ ಅಪಘಾತದ ಪರಿಣಾಮ ಆರೋಪಿಯು ಕೂಡ ತನ್ನದ್ವಿ ಚಕ್ರ ವಾಹನದ ಸಮೇತ ರಸ್ತೆಗೆ ಬಿದ್ದು ಅವರ ಬೆನ್ನಿಗೆ, ಕೈಗೆ, ಸೊಂಟದ ಬಳಿ, ಎಡಕಾಲಿಗೆ ತರಚಿದ ಗಾಯವಾಗಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ 31/08/2021 ರಂದು ಪಿರ್ಯಾದಿದಾರರಾಧ ಶೇಕ್‌ಶಾದತ್‌ (22) ತಂದೆ: ಶೇಕ್‌ಶುಕೂರ್‌ ವಾಸ:ಕೆಎಂ ಮಂಜಿಲ್‌, ತೆಳ್ಳಾರು, ದುರ್ಗಾ ಗ್ರಾಮ, ಕಾರ್ಕಳ ತಾಲೂಕು, ಇವರು ಕಾರ್ಕಳದಿಂದ ತನ್ನ ಗೆಳೆಯ ಸಂದೀಪ್‌ ಎಂಬವರ ಕಾರು ನಂಬ್ರ KA-03-ML-3638 ನೇದರಲ್ಲಿ ಸ್ನೇಹಿತರಾದ ಮೊಹಮ್ಮದ್‌ ಅಫಾನ್‌ನೊಂದಿಗೆ ಮಂಗಳೂರಿನ ಶ್ರೀ ದೇವಿ ಕಾಲೇಜಿಗೆ ಫೀಸ್‌ಕಟ್ಟಲು ಹೋಗಿ ವಾಪಸ್ಸು ಕಾರ್ಕಳಕ್ಕೆ ಹೊರಟು ಮದ್ಯಾಹ್ನ 14:45 ಗಂಟೆ ಸುಮಾರಿಗೆ ಪಡುಬಿದ್ರಿಯ ರಮೇಶ ಮಹಾಬಲ ಶೆಟ್ಟಿ ಭಂಟರ ಭವನ ಬಳಿ ತಲುಪಿ ಪಾರಡೈಸ್‌ಬಿರಿಯಾನಿ ಪಾಯಿಂಟ್‌ ಹೋಟೆಲ್‌ಗೆ ಊಟ ಮಾಡಲೆಂದು ಹೋಗಲು ಹೋಟೇಲ್‌ನ ಪಾರ್ಕಿಂಗ್‌ಸ್ಥಳದಲ್ಲಿ ಕಾರು ನಿಲ್ಲಿಸಿ ಊಟ ಮಾಡಲು ಹೋದಾಗ KA-01-AD-3184 ನಂಬ್ರದ ಲಾರಿ ಚಾಲಕ ಅಜಯ್ ಕುಮಾರ್‌ ಎಂಬಾತನು ತನ್ನ ಲಾರಿಯನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡ ಬದಿಗೆ ಬಂದು ಹೋಟೇಲ್‌ನ ಪಾರ್ಕಿಂಗ್‌ಸ್ಥಳದಲ್ಲಿ ನಿಲ್ಲಿಸಿದ್ದ ಶೇಕ್‌ಶಾದತ್‌ ರವರು ಬಂದಿದ್ದ ಕಾರು ನಂಬ್ರ KA-03-ML-3638 ನೇದಕ್ಕೆ ಡಿಕ್ಕಿ ಹೊಡೆದು, ನಂತರ ಅಲ್ಲೇ ಪಾರ್ಕಿಂಗ್‌ಸ್ಥಳದಲ್ಲಿ ಇದ್ದ KA-20-EH-6009 ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದು, ಬಳಿಕ KA-20-U-9566 ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದು ರಸ್ತೆಯಿಂದ ತೀರಾ ಎಡಬದಿಗೆ ಬಂದು ಮಣ್ಣು ರಸ್ತೆಯಲ್ಲಿ ಹೂತು ಹೋಗಿರುತ್ತದೆ. ಈ ಅಫಘಾತದಿಂದ ಶೇಕ್‌ಶಾದತ್‌ ರವರ ಕಾರು ಹಾಗೂ 2 ಮೋಟಾರು ಸೈಕಲ್‌ ಸಂಪೂರ್ಣವಾಗಿ ಜಖಂಗೊಂಡಿದ್ದು, ರಸ್ತೆ ಬದಿಯಲ್ಲಿದ್ದ ವಿದ್ಯುತ್‌ಕಂಬ ಕೂಡಾ ಮುರಿದು ಬಿದ್ದಿದ್ದು, ಯಾವುದೇ ಗಾಯ ನೋವುಗಳುಂಟಾಗಿರುವುದಿಲ್ಲವಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 85/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಉಡುಪಿ: ದಿನಾಂಕ 31/08/2021 ರಂದು ಪಿರ್ಯಾದಿದಾರರಾಧ ಅಶೋಕ್‌ ಕುಮಾರ್‌ಪಿ.ಎಸ್.ಐ ಉಡುಪಿ ನಗರ ಪೊಲೀಸ್ ಠಾಣೆ ಉಡುಪಿ ಇವರು ಕೃಷ್ಣ ಮಠದಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದಾಗ 18:15 ಗಂಟೆಗೆ ಉಡುಪಿ ನಗರ ಠಾಣೆಯ ಪಿ.ಐ ರವರು ಲಾಡ್ಜ್ ನ ರೂಮ್‌ ಒಂದರಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿ ಇಸ್ಪೀಟು ಜುಗಾರಿ ಜೂಜಾಟ ಆಡುತ್ತಿರುವ ಬಗ್ಗೆ ನೀಡಿದ ಖಚಿತ ಮಾಹಿತಿಯ ಮೇರೆಗೆ ಮಾನ್ಯ ಪೊಲೀಸ್ ಉಪಾಧೀಕ್ಷಕರಿಂದ ಸರ್ಚ್ ವಾರೆಂಟ್ ಪಡೆದು ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ 20:00 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಡಯಾನಾ ಜಂಕ್ಷನ್ ಬಳಿ ಇರುವ ಲಾಡ್ಜ್ ನ ರೂಮ್ ನಂಬ್ರ 212 ರಲ್ಲಿ ಒಮ್ಮೆಲೆ ದಾಳಿ ನಡೆಸಿ, ರಾಜ್ಯ ಸರ್ಕಾರ ವಿಧಿಸಿದ ಕೋವಿಡ್ ಸಾಂಕ್ರಾಮಿಕ  ರೋಗದ  ತಡೆ ಸಂಬಂಧ ನಿಬಂಧನೆಗಳನ್ನು ಉಲ್ಲಂಘನೆ ಮಾಡಿ, ಕೊರೊನಾ ಖಾಯಿಲೆಯ ಹರಡುವುದನ್ನು ತಡೆತಟ್ಟಲು ನಿರ್ಲಕ್ಷ್ಯ ವಹಿಸಿ, ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಎಂಬ ಇಸ್ಪೀಟು ಜುಗಾರಿ ಜೂಜಾಟದಲ್ಲಿ ನಿರತರಾಗಿದ್ದ ಆರೋಪಿ 1) ದಿನೇಶ ತಂದೆ: ಸುಂದರ್ ಕೋಟ್ಯಾನ್ ವಾಸ: ಕಸ್ತೂಬಾ ನಗರ, ಉಡುಪಿ 2)  ಪ್ರಸಾದ್ ತಂದೆ: ಬಾಬು ಪೂಜಾರಿ ವಾಸ: ಇಂದಿರಾನಗರ, ಉಡುಪಿ 3) ರಾಜೇಶ್ ದೇವಾಡಿಗ ತಂದೆ: ದಿ: ವಿಠಲ್ ದೇವಾಡಿಗ ವಾಸ: ಕುಕ್ಕಿಕಟ್ಟೆ, 4)  ಸುರೇಶ್ ತಂದೆ: ದಿ: ಶ್ರೀನಿವಾಸ ದೇವಾಡಿಗ ವಾಸ: ಕೊಡವೂರು 5) ಚಂದ್ರಶೇಖರ ಶೆಟ್ಟಿ ತಂದೆ: ದಿ. ಮಾಧವ ಶೆಟ್ಟಿ ವಾಸ: ಇಂದಿರಾ ನಗರ, ಉಡುಪಿ 6) ಚಂದ್ರಶೇಖರ ತಂದೆ: ಅಯ್ಯಪ್ಪ ವಾಸ: ಕಲ್ಸಂಕ, ಉಡುಪಿ ಇವರನ್ನು ವಶಕ್ಕೆ ಪಡೆದು ವಿಚಾರಿಸಿದ್ದು,  ಲಾಡ್ಜ್ ನ ಮ್ಯಾನೇಜರ್ ಸತೀಶ್ ಶೆಟ್ಟಿ ರವರು ಯಾವುದೇ ಪರವಾನಿಗೆ ಇಲ್ಲದೇ ರಾಜ್ಯ ಸರ್ಕಾರ ವಿಧಿಸಿದ ಕೋವಿಡ್ ಸಾಂಕ್ರಾಮಿಕ  ರೋಗದ  ತಡೆ ಸಂಬಂಧ ನಿಬಂಧನೆಗಳನ್ನು ಉಲ್ಲಂಘನೆ ಮಾಡಿ, ಕಾನೂನು ಬಾಹಿರವಾಗಿ ಇಸ್ಪೀಟು ಜುಗಾರಿ ಆಟವನ್ನು ಆಡಲು ಕೋಣೆಯನ್ನು ನೀಡಿದ್ದು, ಎಲ್ಲಾ ಆರೋಪಿತರನ್ನು ದಸ್ತಗಿರಿ ಮಾಡಿ, ಇಸ್ಪೀಟು ಜುಗಾರಿ  ಆಟಕ್ಕೆ ಬಳಸಿದ  ಒಟ್ಟು ನಗದು ರೂಪಾಯಿ 9,290/-,  ಬೆಡ್ ಮೇಲಿದ್ದ ಬಿಳಿ ಬಣ್ಣದ ಬೆಡ್ ಶೀಟ್, 52 ಇಸ್ಪೀಟು ಎಲೆಗಳು, 6 ಮೊಬೈಲ್ ಪೋನ್, 1 ಅಟೋ ರಿಕ್ಷಾ ಮತ್ತು 1 ಮೋಟಾರ್‌ ಸೈಕಲ್‌ ನ್ನು ಮುಂದಿನ ನಡವಳಿಕೆಯ ಬಗ್ಗೆ 20:00 ಗಂಟೆಯಿಂದ 22:00 ಗಂಟೆಯವರೆಗೆ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 123/2021 ಕಲಂ: 269 ಐಪಿಸಿ ಮತ್ತು ಕಲಂ: 79, 80 ಕರ್ನಾಟಕ ಪೊಲೀಸ್ ಕಾಯ್ದೆ  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಕುಮಾರಿ ಸುಮನ ಕೆ(49) ಹಿಂದಿನ ಪಂಚಾಯತ್ ಅಭಿವೃದ್ದಿ ಅಧಿಕಾರಿ ಗ್ರಾಮ ಪಂಚಾಯತ್ ಪೆರ್ಡೂರು ಇವರು ಪರಿಶಿಷ್ಟ ಜಾತಿಗೆ ಸೇರಿದವರು ಆಗಿದ್ದು ಪೆರ್ಡೂರು ಗ್ರಾಮ ಪಂಚಾಯತ್ ಅಬಿವೃದ್ದಿ ಅಧಿಕಾರಿಯಾಗಿ ದಿನಾಂಕ 20/05/2021 ರಿಂದ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಈ ಸಮಯ ನವೀನ ತಂದೆ ಗೋಪು ಮುತ್ತುರ್ಮೆ ಪೆರ್ಡೂರು ಗ್ರಾಮ ಇವರು ನೀಡಿದ ಸಾರ್ವಜನಿಕ ಹಿತಾಸಕ್ತಿ ದೂರು ಅರ್ಜಿಯಲ್ಲಿ ಸರ್ವೆ ನಂಬ್ರ 73/03 ರಲ್ಲಿ 15 ಸೆನ್ಸ್ ಜಾಗದಲ್ಲಿ ಹೆಬ್ರಿ ಮತ್ತು ಮುದ್ರಾಡಿ ಗ್ರಾಮ ಪಂಚಾಯತ್ ನಲ್ಲಿ ಪಿ.ಡಿ.ಓ ಕರ್ತವ್ಯ ನಿರ್ವಹಿಸುತ್ತಿರುವ ಸದಾಶಿವ ಸೆರ್ವೆಗಾರ ಇವರು ವಾಸ್ತವ್ಯದ ಮನೆ ಬಗ್ಗೆ ಪಂಚಾಯತ್ ಕಟ್ಟಡ ಪರವಾಣಿಗೆ ನಂಬ್ರ 27/2020-21 ಪಡೆದುಕೊಂಡಿದ್ದು ಸದ್ರಿ ಜಾಗದಲ್ಲಿ ಮನೆ ನಿರ್ಮಾಣದ ಬದಲು ಸರ್ಕಾರಿ ಜಾಗದಲ್ಲಿ ಕಟ್ಟುತ್ತಿರುವ ಮನೆಯ ನಿರ್ಮಾಣವನ್ನು ನಿಲ್ಲಿಸುವಂತೆ ಇದ್ದ ಸಾರ್ವಜನಿಕ ಹಿತಾಸಕ್ತಿ ದೂರಿಗೆ ಸಂಬಂದಿಸಿದಂತೆ ಇವರು 31/07/2021 ರಂದು ಸ್ಥಳ  ಪರೀಶೀಲನೆ ನಡೆಸಿ ಸಮಜಾಯಿಸಿಕೆ ನೀಡುವಂತೆ 02/08/2021 ರಂದು ಪಿರ್ಯಾದಿದಾರರು ನೋಟಿಸ್ ನೀಡಿದ್ದು ಸದ್ರಿ ದೂರು ಅರ್ಜಿಯ ಸ್ಥಳ ಪರೀಶಿಲನೆ ನಡೆಸಿದ ಬಗ್ಗೆ ಆರೋಪಿತರಾಧ . 1) ದೇವು ಪೂಜಾರಿ ಖೈರು ಮನೆ ಹೊಸಂಗಡಿ ಪೆರ್ಡೂರು ಗ್ರಾಮ 2.ತುಕಾರಾಮ್ ನಾಯಕ್  ಶ್ರೀ ಕೃಷ್ಣ ಭವನ ಪೆರ್ಡೂರು  3. ಜಗದೀಶ ಶೆಟ್ಟಿ ತಂದ: ದಿ. ಶೀನ ಶೆಟ್ಟಿವಾಸ: ಕಾಸನ್ ಕೋಡ್ಲೂ ವಾಂಟ್ಯಾಳ ಪೆರ್ಡೂರು ಗ್ರಾಮ 4. ಸಚಿನ್ ಪೂಜಾರಿ ತಾಯಿ: ಲಲಿತಾ  ಕುಕ್ಕಂಜಾರು ಪೆರ್ಡೂರು ಗ್ರಾಮ ಇವರು ಅಸಮಧಾನಗೊಂಡು ಪೆರ್ಡೂರು ಪಂಚಾಯತ್ ನಲ್ಲಿ  ಪಿರ್ಯಾದಿದಾರರು ಕರ್ತವ್ಯ ನಿರ್ವಹಿಸುವಾಗ ಕುಮಾರಿ ಸುಮನ ಕೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಇವರು ಅನೂಸೂಚಿತ ಜಾತಿ ಪಂಗಡ ಸೇರಿದ ಮಹಿಳಾ ಸರಕಾರಿ ಅಧಿಕಾರಿ ಎಂಬುವುದನ್ನು ಮನಗಾನದೇ ಅನುಚ್ಚಿತವಾಗಿ ವರ್ತಿಸಿ ಕಛೇರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಮಹಿಳಾ ಅದೀಕಾರಿಯನ್ನು ಅಪಮಾನ ಗೊಳಿಸಬೇಕೆಂಬ ಉದ್ದೇಶದಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೂರು ಅರ್ಜಿಗೆ ಸಂಬಂದಿಸಿ ಯಾವುದೇ ವರದಿಯನ್ನು ಮೇಲಾದಿಕಾರಿಯವರಿಗೆ ಸಲ್ಲಿಸದಂತೆ  ದಮ್ಕಿ ಹಾಕಿರುವುದಾಗಿದೆ. ಅಲ್ಲದೇ 1 ನೇ ಆಪಾದಿತ ದೇವು ಪೂಜಾರಿ ಖೈರು ಮನೆ ಹೊಸಂಗಡಿ ಪೆರ್ಡೂರು ಗ್ರಾಮ ಇವರು ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡುವ ಉದ್ದೇಶದಿಂದ ಮೇಲಾದಿಕಾರಿಯವರಿಗೆ ಶಿಸ್ತು ಕ್ರಮ ನಡೆಯಲೆಂಬ ಉದ್ದೇಶದಿಂದ ಸುಳ್ಳು ಮಾಹಿತಿ ನೀಡಿದ್ದು ಅಲ್ಲದೇ ದಿನಾಂಕ 30/08/2021 ರಂದು  ಕುಮಾರಿ ಸುಮನ ಕೆ ಇವರಿಗೆ ಅಗೌರವ ಆಗುವ ರೀತಿಯಲ್ಲಿ ನೀನು ಈ ದಿವಸವೇ ನಿಮ್ಮ ಪ್ರಭಾರವನ್ನು ಹಸ್ತಾಂತರಿಸಿ ನಾಳೆಯ ಸಭೆಗೆ ಬರುವುದು ಬೇಡ ಎಂಬುದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47 /2021  ಕಲಂ: 3(1)(ಪಿ) ,3(1) (ಕ್ಯೂ) ,3(1) (ಆರ್) ಎಸ್ ಸಿ ಎಸ್ ಟಿ ಕಾಯಿದೆ ಮತ್ತು 353 ,503 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 31/08/2021 ರಂದು ಬೆಳಿಗ್ಗೆ 11:30 ಗಂಟೆಗೆ ಅವರ ಜಾಗದ ಹತ್ತಿರ ಸರಕಾರಿ ಜಾಗದಲ್ಲಿ ಗುಂಡಿ ತೆಗೆದು ಅಡಿಕೆ ಗಿಡವನ್ನು ನೆಡುತ್ತಿದ್ದ ಆಪಾದಿತರಾದ ಕಸ್ತೂರಿ, ಅಣ್ಣಪ್ಪ, ಸುಬ್ರಹ್ಮಣ್ಯ, ಶಾರದಾ, ಸಿಂಗಾರಿ, ಶ್ರೀಕಲಾ ಮತ್ತು ಶ್ರೀಧರ ರವರಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಕಮಲಾ (24) ಗಂಡ; ಪ್ರಶಾಂತ್ ಗೌಡ, ವಾಸ; ಹುಲ್ಕಲ್ ಮನೆ, ಯಳಜಿತ್ ಗ್ರಾಮ, ಬೈಂದೂರು ಇವರು ಮತ್ತು ಅವರ ತಾಯಿ ಲಕ್ಷ್ಮೀರವರು ವಿಚಾರಿಸಿದ್ದಕ್ಕೆ ಗಿಡ ನೆಡುತ್ತಿದ್ದ ಕಸ್ತೂರಿ ರವರು ಏಕಾಏಕಿ ಬಂದು ಶ್ರೀಮತಿ ಕಮಲಾ ರವರಿಗೆ ಕೈಯಿಂದ ದೂಡಿದ ಪರಿಣಾಮ ಇವರು ನೆಲಕ್ಕೆ ಬಿದ್ದಿದ್ದು ನಂತರ ಆಪಾದಿತರಾದ ಅಣ್ಣಪ್ಪ ಮತ್ತು ಸುಬ್ರಹ್ಮಣ್ಯರವರು ಬೇಲಿಗೆ ಹಾಕಿದ ಕೋಲಿನಿಂದ ಇವರ ತಲೆಗೆ, ಎದೆಗೆ, ಬೆನ್ನಿಗೆ ಹೊಡೆದ ಪರಿಣಾಮ ಶ್ರೀಮತಿ ಕಮಲಾ ರವರ ಮಾಂಗಲ್ಯ ಸರ ತುಂಡಾಗಿ ಬಿದ್ದಿದ್ದು ಸ್ಥಳದಲ್ಲಿಯೇ ಸಿಕ್ಕಿದ್ದು, ಆಪಾದಿತರಾದ ಸಿಂಗಾರಿ, ಶ್ರೀಕಲಾ ಹಾಗೂ ಶ್ರೀಧರರವರು ಅವಾಚ್ಯ ಶಬ್ದಗಳಿಂದ ಬೈದ್ದಿದ್ದು ಅಲ್ಲದೇ ಆಪಾದಿತರಾದ ಅಣ್ಣಪ್ಪ ಹಾಗೂ ಸುಬ್ರಹ್ಮಣ್ಯರವರು ಮುಂದಕ್ಕೆ ಜಾಗದ ವಿಷಯಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲವೆಂದು ಶ್ರೀಮತಿ ಕಮಲಾ ಇವರಿಗೆ ಹಾಗೂ ಅವರ ತಾಯಿಗೆ ಬೆದರಿಕೆ ಹಾಕಿ ಹೋಗಿರುತ್ತಾರೆ, ನಂತರ ಶ್ರೀಮತಿ ಕಮಲಾ ಇವರನ್ನು ಅವರ ಚಿಕ್ಕಮ್ಮ ಶಾರದಾ ರವರು ಉಪಚರಿಸಿ 108 ಅಂಬುಲೆನ್ಸ್ ನಲ್ಲಿ ಚಿಕಿತ್ಸೆಯ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಈ ಕೃತ್ಯಕ್ಕೆ ತಮ್ಮ ಜಾಗದ ಬಳಿ ಇರುವ ಸರ್ಕಾರಿ ಜಾಗಕ್ಕೆ ಸಂಬಂಧಿಸಿದ ತಕರಾರು ಕಾರಣವಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 144/2021 ಕಲಂ: 323, 324, 354, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾಧ ಶ್ರೀಕಲಾ (25) ಗಂಡ ;ಸುಬ್ರಹ್ಮಣ್ಯ , ವಾಸ; ಹುಲ್ ಕಲ್ ಮನೆ , ತೊಂಡ್ಲೆ ಯಳಜಿತ್ ಗ್ರಾಮ, ಬೈಂದೂರು ಇವರು ಅವರ ಮನೆಯ ಪಕ್ಕದಲ್ಲಿರುವ ಕುಮ್ಕಿ ಸರ್ಕಾರಿ ಜಾಗದಲ್ಲಿ ಗೇರು ಕೃಷಿ ಮಾಡಿಕೊಂಡಿದ್ದು, ಈಗ ಆ ಜಾಗವನ್ನು ಸಮತಟ್ಟು ಮಾಡಿ ಅಡಿಕೆ ಗಿಡ ನೆಡಲು ಸಿದ್ದಮಾಡಿಕೊಂಡು   ದಿನಾಂಕ 31/08/2021 ರಂದು 11:30 ಗಂಟೆಗೆ ಶ್ರೀಕಲಾ ಇವರು, ಅವರ ತಾಯಿ ಕಸ್ತೂರಿ, ಗಂಡ ಸುಬ್ರಹ್ಮಣ್ಯ, ಚಿಕ್ಕಮ್ಮ ಶಾರದಾ, ಅಣ್ಣ ಶ್ರೀಧರ ರವರೊಂದಿಗೆ ಕುಮ್ಕಿ ಸರ್ಕಾರಿ ಜಾಗದಲ್ಲಿ ಅಡಿಕೆ ಗಿಡ ನೆಡುತ್ತಿರುವಾಗ ಆರೋಪಿತರಾದ ಲಕ್ಷ್ಮೀ,  ಕಮಲ ,ಪವಿತ್ರ , ಬಾಬು ,  ದಿನೇಶ, ಮಾಲತಿ , ಪ್ರಶಾಂತ,  ನಾಗರಾಜ,  ಚೈತ್ರ , ರಾಜು ಹಾಗೂ ಶಾಂತ ರವರು ಸದ್ರಿ ಜಾಗಕ್ಕೆ ಬಂದು ಶ್ರೀಕಲಾ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಅವರು ನೆಟ್ಟಿದ್ದ ಗಿಡಗಳನ್ನು ಕಿತ್ತು ಬಿಸಾಡಿ ವಿಚಾರಿಸಿದ ಶ್ರೀಕಲಾ ರವರಿಗೆ ಆರೋಪಿ ಲಕ್ಷ್ಮೀ ರವರು ಹೊಂಡಕ್ಕೆ ದೂಡಿ ಹಾಕಿದ್ದು,  ಆರೋಪಿತರಾದ ಕಮಲ, ಬಾಬು, ದಿನೇಶ ರವರು ಅಲ್ಲಿಯೇ ಇದ್ದ ಬೇಲಿ ಗುಟ್ಟ ದಿಂದ ಶ್ರೀಕಲಾ ರವರಿಗೆ ಬೆನ್ನಿಗೆ, ಸೊಂಟಕ್ಕೆ, ಕಾಲಿಗೆ, ಕೈಗೆ ಹೊಡೆದಿರುತ್ತಾರೆ, ಉಳಿದ ಆರೋಪಿತರು ಬೈದು ಬೆದರಿಕೆ ಹಾಕಿರುತ್ತಾರೆ ನಂತರ ಶ್ರೀಕಲಾ ರವರು ಬೊಬ್ಬೆ ಹಾಕಿದ್ದನ್ನು ಕೇಳಿ ಇವರ ತಾಯಿ, ಹಾಗೂ ಚಿಕ್ಕಮ್ಮ ಬಂದು ಅವರನ್ನು ಉಪಚರಿಸಿ ಒಂದು ರಿಕ್ಷಾದಲ್ಲಿ ಬೈಂದೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 145/2021 ಕಲಂ: 323.324,354,504.506 ಜೊತೆಗೆ 149  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-09-2021 10:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080