ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ಸಂಜಯ ವಿ ನಾಯಕ್ (48), ತಂದೆ: ವಾಮನ ಎಸ್ ನಾಯಕ್, ವಾಸ: ಶ್ರೀ ರಕ್ಷಾ, ವಿಷ್ಣುಮೂರ್ತಿ ನಗರ ಕುಂಜಿಬೆಟ್ಟು ಉಡುಪಿ ಇವರು ದಿನಾಂಕ 31/07/2021 ರಂದು ಸಂಜೆ 6:45 ಗಂಟೆಗೆ ಕಲ್ಸಂಕ ಕಡೆಯಿಂದ ಎಮ್‌ಜಿಎಮ್ ಕಡೆಗೆ ತನ್ನ ಸ್ಕೂಟರ್ ನಂಬ್ರ KA-20-X-3402 ನೇ ದರಲ್ಲಿ ಬಂದು ಶಿವಳ್ಳಿ ಗ್ರಾಮದ ಎಮ್‌.ಜಿ.ಎಮ್ ಬಳಿ ರಾಷ್ಟ್ರೀಯ .ಹೆದ್ದಾರಿ 169(ಎ) ರಸ್ತೆ ಯ ಯು ಟರ್ನ್ ನಲ್ಲಿ ಬಲಬದಿಯ ಇಂಡಿಕೇಟರ್ ಹಾಕಿ ಸ್ಕೂಟರನ್ನು ಬಲಬದಿಗೆ ತಿರುಗಿಸುತ್ತಿರುವಾಗ ಕಲ್ಸಂಕ ಕಡೆಯಿಂದ ಮಣಿಪಾಲ ಕಡೆಗೆ KA-20-ES-2534 ಮೋಟಾರು ಸೈಕಲ್ ಸವಾರ ಅನಿಲ ತನ್ನ ಮೋಟಾರು ಸೈಕಲಿನಲ್ಲಿ ನಿಖಿಲ್ ಕುಮಾರ್ ಎಂಬುವವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿನ ಬಲಬದಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲಭುಜಕ್ಕೆ ಮೂಳೆಮುರಿತದ ಗಂಭೀರ ಗಾಯ ಉಂಟಾಗಿರುವುದಾಗಿದೆ. ಅಲ್ಲದೇ KA-20-ES-2534 ಮೋಟಾರು ಸೈಕಲ್ ಸಹಸವಾರರಾದ ನಿಖಿಲ್ ರಸ್ತೆಗೆ ಬಿದ್ದು ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಮಲ್ಪೆ: ಪಿರ್ಯಾದಿದಾರರಾದ ಎಂ ಯು ಶೈನಿ (20),ತಂದೆ: ಎಂ ಎಂ ಉತ್ತಪ್ಪ, ವಾಸ: ಮನೆ ನಂಬ್ರ 259 4 ನೇ ಸ್ಟೇಜ್ ವಿಜಯಪುರ, ಮೈಸೂರು ಇವರು ತನ್ನ ಸ್ನೇಹಿತರಾದ ನವ್ಯ ಮಂದಣ್ಣ, ನಿಖಿಲ್ ಗೌಡ, ದೇಚಮ್ಮ ಯು ಜೆ ರವರೊಂದಿಗೆ ಪ್ರವಾಸದ ಬಗ್ಗೆ ದಿನಾಂಕ 30/07/2021 ರಂದು ವಾಹನದಲ್ಲಿ ಹೊರಟು ಮಂಗಳೂರಿಗೆ ಬಂದಿದ್ದು ಮಂಗಳೂರಿನಿಂದ 31/07/2021 ರಂದು ಮಧ್ಯಾಹ್ನ ಮಲ್ಪೆ ಬೀಚ್ ಗೆ ಬಂದು ಬ್ಲೂಬೆ ರೆಸಾರ್ಟ್ ನಲ್ಲಿ ಉಳಿದುಕೊಂಡು ದಿನಾಂಕ 01/08/2021 ರಂದು ಬೆಳಿಗ್ಗೆ 11:20 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಮತ್ತು ನವ್ಯ ಮಂದಣ್ಣ, ನಿಖಿಲ್ ಗೌಡ, ದೇಚಮ್ಮ ಯು ಜೆ(20) ಸೇರಿ ಮಲ್ಪೆ ಬೀಚ್ ಸಮುದ್ರ ದಲ್ಲಿ ಆಟವಾಡುತ್ತಿದ್ದು ಬೆಳಿಗ್ಗೆ 11:30 ಗಂಟೆ ಗೆ ಸಮುದ್ರದ ನೀರಿನಲ್ಲಿ ತೆರೆಯ ಅಬ್ಬರಕ್ಕೆ 4 ಜನರು ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಆ ಸಮಯ ಸ್ಥಳದಲ್ಲಿದ್ದ ತಮಿಳುನಾಡು ದೋಣಿಯ ಅನಿಲ್ ಹಾಗೂ ಇತರರು ಸೇರಿ ಪಿರ್ಯಾದಿದಾರರು, ನವ್ಯ ಮಂದಣ್ಣ, ಲಿಖಿತ್ ಗೌಡ ನನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದು ಆ ಪೈಕಿ ದೇಚಮ್ಮ ಯು ಜೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕಾಣೆಯಾಗಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 91/2021 ಕಲಂ:ಹುಡುಗಿ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ. 

 

ಇತ್ತೀಚಿನ ನವೀಕರಣ​ : 01-08-2021 06:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080