ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಫಿರ್ಯಾದಿ ನಾಜಿನಿನ್  ಪ್ರಾಯ 39  ವರ್ಷ, ಗಂಡ:  ರಿಜ್ವಾನ್ ಕಸ್ಟಮ್  , ವಾಸ; ನ್ಯೂ ಕಾಲೋನಿ, ಕೇಸರಕೋಡಿ, ಶಿರೂರು  ಗ್ರಾಮ, ಬೈಂದೂರು ತಾಲೂಕು  ಇವರು ದಿನಾಂಕ; 23/06/2021 ರಂದು ಮನೆಯ ದಿನಸಿ ಸಾಮಾನು ತರುವರೇ ಅವರ ಗಂಡನಾದ ರಿಜ್ವಾನ್ ರವರ ಬಾಬ್ತು ಮೋಟಾರ್ ಸೈಕಲ್ ನಂಬ್ರ KA 20 EC 5113 ನೇದರಲ್ಲಿ ಸಹಸವಾರಳಾಗಿ ಕುಳಿತುಕೊಂಡು ಹೊರಟು ಶಿರೂರು ಗ್ರಾಮದ ಅಂಡರ್ ಪಾಸ್ ಬಳಿ, ಸರ್ವಿಸ್ ರಸ್ತೆಯ ಪಶ್ಚಿಮ ಬದಿಯ ಸುಖಾಯಿ ಕ್ಲಿನಿಕ್ ಎದುರುಗಡೆ ತಲುಪಿದಾಗ ಸಮಯ ಸುಮಾರು 11:30 ಗಂಟೆಗೆ ಕೆಎ 20 ಈಸಿ 5113 ನೇ ಮೋಟಾರ್ ಸೈಕಲ್ ನ್ನು ಅದರ ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಹತೋಟಿ ತಪ್ಪಿ ಇಬ್ಬರು ರಸ್ತೆಗೆ ಬಿದ್ದು ಫಿರ್ಯಾದಿದಾರರಿಗೆ ತಲೆಗೆ ರಕ್ತಗಾಯವಾಗಿರುತ್ತದೆ. ಗಾಯಗೊಂಡವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದ್ದಲ್ಲಿ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ವೈದರ ಸಲಹೆಯಂತೆ ಉಡುಪಿ ಆದರ್ಶ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  110/2021 ಕಲಂ:.279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಲಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಬ್ರಹ್ಮಾವರ : ಪಿರ್ಯಾದಿ ಶರತ್ ಕುಮಾರ್ ಶೆಟ್ಟಿ (36 ವರ್ಷ) ತಂದೆ: ಶೇಖರ್ ಶೆಟ್ಟಿ, ವಾಸ: ಗರಡಿ ಬೆಟ್ಟು, ಪಾದೇಮಠ, ಕೆಂಜೂರು ಅಂಚೆ & ಗ್ರಾಮ, ಬ್ರಹ್ಮಾವರ ತಾಲೂಕು ಇವರು ಹೊಸೂರು ಗ್ರಾಮದ ಕರ್ಜೆ ಅನಘ ಬಾರ್ & ರೆಸ್ಟೋರೆಂಟ್‌ನ ಮೆನೇಜರ್‌ ಆಗಿದ್ದು, ಅದೇ ಬಾರ್‌ನಲ್ಲಿ ಗಾಂಧಿನಗರ, ಪೆಜಮಂಗೂರು ಗ್ರಾಮದ ವಾಸಿ ಗಣೇಶ್ ಮೊಗವೀರ (42 ವರ್ಷ) ಎಂಬವರು ಸಪ್ಲೇಯರ್ ಕೆಲಸ ಮಾಡಿಕೊಂಡಿರುತ್ತಾರೆ. ಅವರು ದಿನಾಂಕ: 30.06.2021 ರಂದು ರಾತ್ರಿ 9:30 ಗಂಟೆಗೆ ಬಾರ್‌ನ ಬಾಬ್ತು KA20EU2346 ನಂಬ್ರದ ಟಿವಿಎಸ್ ಜ್ಯೂಪಿಟರ್ ಸ್ಕೂಟರ್‌ನಲ್ಲಿ ಸದ್ರಿ ಬಾರ್‌ನ ಕ್ಲೀನರ್ ಕೆಲಸ ಮಾಡಿಕೊಂಡಿರುವ ಪಾಂಡು ರವರನ್ನು ಆತನ ಮನೆಯಾದ ಕರ್ಜೆ ಜಂಬನಕೊಡ್ಲಿ ಎಂಬಲ್ಲಿಗೆ ಬಿಟ್ಟು ವಾಪಾಸ್ಸು ಬಾರ್‌ ಕಡೆಗೆ ಅಂದರೆ ಕರ್ಜೆ ಕಡೆಗೆ ಸದ್ರಿ ಸ್ಕೂಟರ್‌ ನಲ್ಲಿ ಸವಾರಿ ಮಾಡಿಕೊಂಡು ಬರುವಾಗ ಸಮಯ ರಾತ್ರಿ 9:35 ಗಂಟೆಯಿಂದ 9:40 ಗಂಟೆಯ ಮಧ್ಯಾವಧಿಯಲ್ಲಿ ಕರ್ಜೆ ದ್ಯಾಂಗಲು ಕ್ರಾಸ್ ಬಳಿ ಯಾವುದೋ ಕಾಡು ಪ್ರಾಣಿ ಸ್ಕೂಟರ್‌ ಗೆ ಅಡ್ಡ ಬಂದು ಸ್ಕೂಟರ್‌ಗೆ ಡಿಕ್ಕಿಯಾಗಿ ಆಕಸ್ಮಿಕವಾಗಿ ಆಯಾ ತಪ್ಪಿ ಗಣೇಶ್ ಮೊಗವೀರ ರವರು ಸ್ಕೂಟರ್ ಸಮೇತ ಠಾರು ರಸ್ತೆಯ ಮೇಲೆ ಬಿದ್ದು ತಲೆಗೆ ತೀವ್ರ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಸದ್ರಿ ಢಟನೆಯ ಬಗ್ಗೆ ರಾತ್ರಿ 9:40 ಗಂಟೆಗೆ ಪಿರ್ಯಾದಿದಾರರಿಗೆ ಬಾರ್‌ನಲ್ಲಿರುವಾಗ ತಿಳಿದು ಬಂದು, ನಂತ್ರ ಘಟನಾ ಸ್ಥಳಕ್ಕೆ ಹೋಗಿ ನೋಡಿ ತಿಳಿದುರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ : 35/2021 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತರ ಪ್ರಕರಣ

  • ಕುಂದಾಪುರ : ಪಿರ್ಯಾದಿ ನಾಗರಾಜ ಆಚಾರ್ಯ (ಪ್ರಾಯ 41)ತಂದೆ ವೆಂಕಟರಮಣ ಆಚಾರ್ಯ ವಾಸ ಮಕ್ಕಿಮನೆ ಕಾಳಾವರ ಗ್ರಾಮ ಇವರು  ಕಾಳಾವರ ಗ್ರಾಮ ಸರ್ವೆ ನಂಬ್ರ 137/11ರಲ್ಲಿ ವ್ಯವಸಾಯ ಮಾಡಿಕೊಂಡಿದ್ದು, ಅಜಿತ್ ಶೆಟ್ಟಿ ಹಾಗೂ ಅವರ ಕಡೆಯವರು ದುರುದ್ದೇಶದಿಂದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಮಾನ್ಯ ಜಿಲ್ಲಾ  ನ್ಯಾಯಾಲಯದಲ್ಲಿ ಪಿರ್ಯಾದಿದಾರರ ಪರವಾಗಿ ಆದೇಶವಾಗಿದ್ದು ಆದರೂ ಕೂಡ ತಕರಾರು ಮಾಡಿ ದಿನಾಂಕ 01/07/2021 ರಂದು 11:30 ಗಂಟೆಗೆ ಪಿರ್ಯಾದಿದಾರರು ವ್ಯವಸಾಯದ ಕೆಲಸ ಮಾಡುತ್ತಿರುವಾಗ ಮುಕಾಂಬು ಶೆಟ್ಟಿ ಬಂದು ನಮಗೆ ಯಾವುದೇ ನ್ಯಾಯಾಲಯದ ಆದೇಶ ಬಂದಿರುವುದಿಲ್ಲ ಎಂದು ಹೇಳಿ  ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ   ಬೆದರಿಕೆ ಹಾಕಿ ತಡೆದು ಕೆಲಸಕ್ಕೆ ಅಡ್ಡಿ ಪಡಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 49/2021 ಕಲಂ: 447, 341, 506, IPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 01-07-2021 06:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080