ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ನವೀನ್‌ (26), ತಂದೆ: ಮಂಜಯ್ಯ ಶೆಟ್ಟಿ, ವಾಸ: ಲಕ್ಷ್ಮೀ ನಿವಾಸ, ಕೆಳಗಿನಕೊಂಬೊಟ್ಟು, ಮುಡಾರು ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 31/03/2023 ರಂದು ಬೆಳಗ್ಗೆ ತನ್ನ ದ್ವಿಚಕ್ರವಾಹನವನ್ನು ಬಜಗೋಳಿ ಕಡೆಯಿಂದ ಕಾರ್ಕಳ ಪುಲ್ಕೇರಿ ಕಡೆಗೆ ಸಾಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸವಾರಿ ಮಾಡಿಕೊಂಡು ಕಾರ್ಕಳ ಪೇಟೆಗೆ ಹೊರಟು ಬೆಳಿಗ್ಗೆ 08:00 ಗಂಟೆಗೆ ಕಾರ್ಕಳ ತಾಲೂಕು ಮಿಯಾರು ಗ್ರಾಮದ ಮಾಧವ ಕಾಮತ್‌ ಹೋಟೆಲ್‌ ಬಳಿ ತಲುಪುವಾಗ KA-20-MC-6163 ನೇ ನೋಂದಣಿ ಸಂಖ್ಯೆಯ ಹುಂಡೈ ಕಂಪೆನಿಯ I20 ಮಾದರಿಯ ಕಾರನ್ನು ಚಾಲಕ ಪಾಂಡುರಂಗರವರು ಸಹಪ್ರಯಾಣಿಕರಾಗಿ ಪ್ರೀತಿ ಎಂಬುವವರೊಂದಿಗೆ  ಪುಲ್ಕೇರಿ ಕಡೆಯಿಂದ ಬಜಗೋಳಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಪಿರ್ಯಾದಿದಾರರ ಎದುರು ಬಜಗೋಳಿ ಕಡೆಯಿಂದ ಪುಲ್ಕೇರಿ ಕಡೆಗೆ KL-08-BY-7980 ನೇ ನೋಂದಣಿ ಸಂಖ್ಯೆಯ ಟಿಪ್ಪರ್‌ ನ್ನು ಚಾಲಕ ಅಹ್ಮದ್‌ ಕೆ ಪಿ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಪಾಂಡುರಂಗರವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿಗೆ ಎದುರು ಕಡೆಯಿಂದ ಡಿಕ್ಕಿ ಹೊಡೆದಿರುತ್ತಾನೆ. ಈ ಅಪಘಾತದಿಂದ ಪಾಂಡುರಂಗರವರಿಗೆ ಬಲಕಾಲಿನ ಮೂಳೆ ಮುರಿತಗೊಂಡಿದ್ದು, ಪ್ರೀತಿರವರಿಗೆ ಕಾಲಿನ ಒಳಜಖಂ ನೋವು ಉಂಟಾಗಿರುತ್ತದೆ. ಗಾಯಗೊಂಡ ಪಾಂಡುರಂಗ ಹಾಗೂ ಪ್ರೀತಿರವರು ಚಿಕಿತ್ಸೆ ಬಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2023  ಕಲಂ: 279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಪಿರ್ಯಾದಿದಾರರಾದ ಮಹಾಬಲ ನಾಯ್ಕ (35), ತಂದೆ:ಲಕ್ಷಣ ನಾಯ್ಕ, ವಾಸ:  ಗೊರಾಜೆ  76 ಹಾಲಾಡಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 31/03/2023 ರಂದು KA-20-EG-5781ನೇ ನಂಬ್ರದ ಮೋಟಾರ ಸೈಕಲನಲ್ಲಿ ಕುಂದಾಪುರ  ತಾಲೂಕಿನ 76 ಹಾಲಾಡಿ ಗ್ರಾಮದ  ಗೊರಾಜೆ  ಕ್ರಾಸ್  ಎಂಬಲ್ಲಿ     ಶ್ರೀಮತಿ  ಶ್ರೀದೇವಿ  ಹಾಗೂ  ಮಗ ಲೆಹನ್  ಇವರನ್ನು  ಕುಳ್ಳಿರಿಸಿಕೊಂಡು ಹೈಕಾಡಿ  ಕಡೆಗೆ  ಹೋಗುತ್ತಿರುವಾಗ   ಆರೋಪಿ  KA-20-MC-5648  ನೇ ನಂಬ್ರದ  ಕಾರನ್ನು  ಹೈಕಾಡಿ ಕಡೆಯಿಂದ  ಹಾಲಾಡಿ ಕಡೆಗೆ  ಅತೀ ವೇಗ   ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು  ಹೋಗುತ್ತಿದ್ದ  ಮೋಟಾರ  ಸೈಕಲ್‌ಗೆ  ಡಿಕ್ಕಿ ಹೊಡೆದ ಪರಿಣಾಮ  ಮೋಟಾರ್  ಸೈಕಲ್‌  ಸವಾರ   ಮಹಾಬಲ ನಾಯ್ಕ ಹಾಗೂ  3 ವರ್ಷ 6   ತಿಂಗಳ  ಪ್ರಾಯದ  ಮಗು   ಲೆಹನ್  ಇವನಿಗೆ  ಮೂಳೆ  ಮುರಿತದ   ಹಾಗೂ    ಶ್ರೀಮತಿ   ಶ್ರೀದೇವಿ ಇವರಿಗೆ ತರಚಿದ  ಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/2023 ಕಲಂ :279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಸುರೇಂದ್ರ ನಾಯ್ಕ (34), ತಂದೆ: ದೇವ ನಾಯ್ಕ  ವಾಸ:  ಉಪ್ಪಿನಮಕ್ಕಿ  ಯಡಮೊಗ್ಗೆ ಗ್ರಾಮ  ಕುಂದಾಪುರ  ತಾಲೂಕು  ಇವರ   ತಮ್ಮ ರವೀಂದ್ರ (32) ಇವರು ದಿನಾಂಕ  31/03/2023   ರಂದು   ಬೆಳಿಗ್ಗೆ  10:30  ಗಂಟೆಗೆ ಕುಂದಾಪುರ  ತಾಲೂಕಿನ  ಯಡಮೊಗ್ಗೆ ಗ್ರಾಮದ   ಉಪ್ಪಿನಮಕ್ಕಿ  ಎಂಬಲ್ಲಿ  ಅವಿನಾ  ಎಂಬುವವರಿಗೆ  ಸೇರಿದ  ಅಡಿಕೆ  ತೋಟದಲ್ಲಿ  ಅಡಿಕೆ  ಮರದಿಂದ  ಅಡಿಕೆ  ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ   ಅಡಿಕೆ  ಮರದಿಂದ  ಕೈ ತಪ್ಪಿ   ಕೆಳಗೆ  ಬಿದ್ದು  ಗಾಯಗೊಂಡವರನ್ನು ಚಿಕಿತ್ಸೆಯ  ಬಗ್ಗೆ   ಕೊಟೇಶ್ವರ   ಡಾ. ಎನ್‌,ಆರ್  ಆಚಾರ್ಯ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ   ಅಲ್ಲಿ  ವೈದ್ಯರು  ರವೀಂದ್ರ ರವರನ್ನು ಪರೀಕ್ಷಿಸಿದ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 08/2023  ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
         

ಇತ್ತೀಚಿನ ನವೀಕರಣ​ : 01-04-2023 09:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080