ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾದ ಶ್ರೀಮತಿ ವಸಂತಿ ಕುಮಾರಿ (61) ಗಂಡ: ಕೆ.ಪಿ. ವಲ್ಸನ್‌ ವಾಸ: ಶೀನಾ ನಿವಾಸ ವೆಟ್ಟಿಕುತ್ತು ರೋಡ್‌ ರೋಸ್‌ ನಗರ ನಿಲಂಬೂರು ಗ್ರಾಮ ಮತ್ತು ತಾಲೂಕು ಮಲಪುರಂ ಜಿಲ್ಲೆ ಕೇರಳ ರಾಜ್ಯ ಇವರು ತನ್ನ ಗಂಡ ಕೆ.ಪಿ. ವಲ್ಸನ್‌ (72) ಜೂತೆಯಲ್ಲಿ ಗಂಡನ ಪರಿಚಯದವರಾದ ನಾರಾಯಣನ್‌ ಮತ್ತು ರಾಜನ್‌ ಎಂಬವರೊಂದಿಗೆ ದಿನಾಂಕ 30/12/2022 ರಂದು ರಾತ್ರಿ ನಾರಾಯಣನ್‌ ರವರ KL-07 CD-681 ನೇ ಕಾರಿನಲ್ಲಿ ಕೇರಳ ರಾಜ್ಯದ ನಿಲಂಬೂರುನಿಂದ ಕೊಲ್ಲೂರು ಶ್ರೀ.ಮೂಕಾಂಬಿಕಾ ದೇವಸ್ಥಾನ ದೇವರ ದರ್ಶನಕ್ಕೆ ಹೊರಟು ದಿನಾಂಕ 31/12/2022 ರಂದು ಕೊಲ್ಲೂರಿಗೆ ಬಂದು ಕೊಲ್ಲೂರು ಗ್ರಾಮದ ಶ್ರೀ. ಮಹಾಲಕ್ಷ್ಮೀ ರೆಸಿಡೆನ್ಸಿ ಹೋಟೆಲ್‌ನಲ್ಲಿ ಪಿರ್ಯಾಧಿದಾರರು ಮತ್ತು ಅವರ ಗಂಡ ಕೆ.ಪಿ. ವಲ್ಸನ್‌ರವರು ಕೊಠಡಿ ಸಂಖ್ಯೆ 1020 ರಲ್ಲಿ ಹಾಗೂ ನಾರಾಯಣನ್‌ ಮತ್ತು ರಾಜನ್‌ ರವರು ಕೊಠಡಿ ಸಂಖ್ಯೆ 1019 ರಲ್ಲಿ ಉಳಿದುಕೊಂಡಿದ್ದು ಕೊಲ್ಲೂರು ದೇವರ ದರ್ಶನ ಮಾಡಿ ಹಾಗೂ ಕೊಡಚಾದ್ರಿಗೆ ಹೋಗಿ ಶ್ರೀ. ಮಹಾಲಕ್ಷ್ಮೀ ರೆಸಿಡೆನ್ಸಿ ಹೋಟೆಲ್‌ನಲ್ಲಿ ಉಳಿದುಕೊಂಡಿದಾಗ ದಿನಾಂಕ 01/01/2023 ರಂದು ಬೆಳಿಗ್ಗೆ 08:45 ಗಂಟೆಗೆ ಕೆ.ಪಿ. ವಲ್ಸನ್‌ ರವರಿಗೆ ಆರೋಗ್ಯದಲ್ಲಿ ಎರುಪೇರು ಉಂಟಾಗಿ ಅಸ್ವಸ್ಥಗೊಂಡು ಉಸಿರಾಡಲು ತೊಂದರೆ ಕಾಣಿಸಿ ಕೊಂಡವರನ್ನು ಪಿರ್ಯಾಧಿದಾರರು ಹೋಟೆಲ್‌ ಸಿಬ್ಬಂದಿ ಮತ್ತು ಜೂತೆಯಲ್ಲಿ ಬಂದ ನಾರಾಯಣನ್‌ ಮತ್ತು ರಾಜನ್‌ ರವರೊಂದಿಗೆ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವುದಾಗಿ ಸೂಚಿಸಿ ದಂತೆ ಕುಂದಾಫುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಬೆಳಗ್ಗೆ 10:10 ಗಂಟೆಗೆ ವೈದ್ಯರು ಪರೀಕ್ಷಿಸಿ ಚಿಕಿತ್ಸೆಗೆ ಕರೆ ತರುವ ದಾರಿಯಲ್ಲಿ ಮೃತಪಟ್ಟಿರುವುದಾಗಿ ದೃಡೀಕರಿಸಿ ರುತ್ತಾರೆ. ಮೃತ ಕೆ.ಪಿ. ವಲ್ಸನ್‌ ರವರು ಹಲವು ವರ್ಷಗಳಿಂದ ವಯೋಸಹಜ ರಕ್ತದೊತ್ತಡ ಮತ್ತು ಶುಗರ್ ಖಾಯಲೆಯಿಂದ ಬಳಲುತಿದ್ದವರು ಅದೇ ಕಾರಣದ ಅಥವಾ ಹೃದಯ ಸಂಬಂಧಿ ತೊಂದರಗಳಿಂದ ಮೃತಪಟ್ಟಿರುತ್ತಾರೆ ಮೃತ ಮರಣದ ಸರಿಯಾದ ಕಾರಣ ತಿಳಿಯಲು ವೈದ್ಯಕೀಯ ಶವಪರೀಕ್ಷೆ ಜರುಗಿಸಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣಾ ಯುಡಿಆರ್ ಕ್ರಮಾಂಕ 01/2023 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು:ಪಿರ್ಯಾದಿದಾರ ದೇವಿಪ್ರಸಾದ್ (20) ತಂದೆ: ಉಮೇಶ್‌ ಡಿ ರಾವ್ ವಾಸ: ಓಂ. ಶ್ರೀ. ನಿಲಯ ಬೋರ್ಲ ಬೆಟ್ಟು, ಅಂಡಾರು ಗ್ರಾಮ, ಕಾರ್ಕಳ ಇವರ ತಂದೆ ಉಮೇಶ್ ರಾವ್(45) ಎನ್ನುವವರು ಅಂಡಾರು ಗ್ರಾಮದ ಬೋರ್ಲಬೆಟ್ಟು ಎಂಬಲ್ಲಿ ವಾಸವಾಗಿದ್ದು, ಪ್ರತಿದಿನ ಕೂಲಿ ಕೆಲಸ ಮುಗಿಸಿಕೊಂಡು ಮಧ್ಯಪಾನ ಸೇವಿಸಿ ಬರುತ್ತಿದ್ದು, ದಿನಾಂಕ 31/12/2022 ರಂದು ಬೆಳಿಗ್ಗೆ 08:00 ಗಂಟೆಗೆ ಕೆಲಸಕ್ಕೆ ಹೋಗಿ ಸಂಜೆ 05:30 ಗಂಟೆಗೆ ಮನೆಗೆ ಬಂದು ವಾಪಾಸು ಮನೆಯಿಂದ ಅಂಡಾರಿನಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ರಾತ್ರಿಯಾದರೂ ಮನೆಗೆ ವಾಪಾಸು ಬಾರದ ಕಾರಣ ಮನೆಯವರೆಲ್ಲರೂ ರಾತ್ರಿ ಸಮಯ ಹುಡುಕಿದರೂ ಸಿಗದ ಕಾರಣ ದಿನಾಂಕ 01/01/2023 ರಂದು ಬೆಳಿಗ್ಗೆ 07:00 ಗಂಟೆಗೆ ಮನೆಯ ಸುತ್ತಮುತ್ತ ದಾರಿಯಲ್ಲಿ ಹುಡುಕಿದಾಗ ಮನೆಯ ಪಕ್ಕದವರಾದ ರವೀಂದ್ರ ಸೆರ್ವೇಗಾರ್ ರವರ ಕೆರೆಯ ಪಕ್ಕದ ಪಂಪ್ ಶೆಡ್ಡಿನ ಬಳಿ ಜಾರಿದಂತೆ ಕಂಡಿದ್ದು ನೆರೆಕೆರೆಯವರನ್ನು ಕರೆದು ಅಡಿಕೆ ಕೊಯ್ಯುವ ದೊಂಟಿಗೆ ಕೊಕ್ಕೆ ಕಟ್ಟಿ ಕೆರೆಯ ನೀರಿನಲ್ಲಿ ಹುಡುಕಿದಾಗ ಉಮೇಶ ಡಿ ರಾವ್ ರವರ ಮೃತ ದೇಹ ಸಿಕ್ಕಿರುವುದಾಗಿದೆ. ಮೃತರು ದಿನಾಂಕ 31/12/2022 ರಂದು ಸಂಜೆ 05:30 ಗಂಟೆಯಿಂದ ದಿನಾಂಕ 01/01/2023 ರಂದು ಬೆಳಿಗ್ಗೆ 07;30 ಗಂಟೆಯ ಮಧ್ಯಾವಧಿಯಲ್ಲಿ ಅಂಡಾರು ಗ್ರಾಮದ ಬೋರ್ಲಬೆಟ್ಟು ಎಂಬಲ್ಲಿರುವ ಪಿರ್ಯಾದಿದಾರರ ಮನೆಯ ಬಳಿ ಇರುವ ರವೀಂದ್ರ ಸೆರ್ವೆಗಾರ್ ಎನ್ನುವವರ ಕೆರೆಗೆ ಆಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣಾ ಯುಡಿಆರ್ ಕ್ರಮಾಂಕ 01/2023 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-01-2023 06:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080